ಶಾಲು ಹಾಗೂ ಮುಸ್ಲಿಂ ಟೋಪಿ ಧರಿಸಿ ದರ್ಶನ್ ಪ್ರಚಾರ

ಶಾಲು ಹಾಗೂ ಮುಸ್ಲಿಂ ಟೋಪಿ ಧರಿಸಿ ದರ್ಶನ್ ಪ್ರಚಾರ

ಮಂಡ್ಯ, ಏ. 2, ನ್ಯೂಸ್ ಎಕ್ಸ್ ಪ್ರೆಸ್: 2019 ಲೋಕಸಭಾ ಚುನಾವಣೆಯ ಸ್ವತಂತ್ರ ಅಭ್ಯರ್ಥಿಯಾಗಿ ಮಂಡ್ಯದಲ್ಲಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಪರವಾಗಿ ನಟ ದರ್ಶನ್​​​​ ನಿನ್ನೆಯಿಂದ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ನಿನ್ನೆ ಶ್ರೀರಂಗಪಟ್ಟಣ ತಾಲೂಕಿನ ಎಲ್ಲಾ ಊರುಗಳಿಗೆ ತೆರಳಿ ದರ್ಶನ್ ಪ್ರಚಾರ ಕೈಗೊಂಡಿದ್ದರು. ಇಂದು ಕೂಡಾ ಬೇರೆ ಬೇರೆ ಊರುಗಳಿಗೆ ತೆರಳಿ ದರ್ಶನ್ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಮಂಡ್ಯದ ಬಿ.ಡಿ. ಕಾಲೋನಿಯಲ್ಲಿ ಕೂಡಾ ದರ್ಶನ್​​​​​​ಗೆ ಅದ್ದೂರಿ ಸ್ವಾಗರ ಸಿಕ್ಕಿದೆ. ಆ ಕಾಲೋನಿಯಲ್ಲಿ ಬಹುತೇಕ ಮುಸ್ಲಿಮ ಧರ್ಮಿಯರು ಹೆಚ್ಚಿದ್ದಾರೆ. ಅಲ್ಲಿಗೆ ಪ್ರಚಾರಕ್ಕಾಗಿ ತೆರಳಿದ್ದ ದಚ್ಚುಗೆ ಅಭಿಮಾನಿವೋರ್ವ ಮುಸ್ಲಿಂ ಧರ್ಮದ ಸಂಕೇತವಾಗಿರುವ ಟೋಪಿ ಹಾಗೂ ಶಾಲನ್ನು ಹೊದಿಸಿದರು. ಅಭಿಮಾನಿ ಹೊದಿಸಿದ ಶಾಲು ಹಾಗೂ ಮುಸ್ಲಿಂ ಟೋಪಿ ಧರಿಸಿಯೇ ದರ್ಶನ್ ಆ ಏರಿಯಾದ ಮುಸ್ಲಿಂ ಬಾಂಧವರ ಬಳಿ ಸುಮಲತಾ ಪರವಾಗಿ ಮತಯಾಚನೆ ಮಾಡಿದರು. ದರ್ಶನ್​​​​​ಗೆ ನೆನಪಿರಲಿ ಪ್ರೇಮ್ ಹಾಗೂ ನಿತ್ಯಾನಂದ ಸಿನಿಮಾ ಖ್ಯಾತಿಯ ಚೇತನ್ ಸಾಥ್ ನೀಡಿದ್ರು.

ಫ್ರೆಶ್ ನ್ಯೂಸ್

Latest Posts

Featured Videos