ಶಾಸಕ ಬೈರತಿ ಹತ್ಯೆಗೆ ಯತ್ನ

ಶಾಸಕ ಬೈರತಿ ಹತ್ಯೆಗೆ ಯತ್ನ

ಬೆಂಗಳೂರು, ಅ. 18 : ಯುವಕನೊಬ್ಬ ಹೆಬ್ಬಾಳ ಶಾಸಕ ಬೈರತಿ ಸುರೇಶ್ ಅವರ ಹತ್ಯೆಗೆ ಪ್ರಯತ್ನಿಸಿದ ಘಟನೆ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಶಾಸಕರ ಹಲ್ಲೆಗೆ ಯತ್ನಿಸಿದ ಯುವಕನನ್ನು ಶಿವಕುಮಾರ್ ಎಂದು ಗುರುತಿಸಲಾಗಿದ್ದು, ಹೆಬ್ಬಾಳ ಶಾಸಕ ಬೈರತಿಗೆ ಚಾಕುವಿನಿಂದ ಇರಿದು ಅವರನ್ನು ಕೊಲೆ ಮಾಡಲು ಮುಂದಾಗಿದ್ದ. ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಆರೋಪಿಯನ್ನು ಹಿಡಿದು ಪೊಲೀಸರ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
ಬೈರತಿ ಗ್ರಾಮದಲ್ಲಿ ಸುರೇಶ್ ಅವರ ನಿವಾಸದ ಸಮೀಪದಲ್ಲಿಯೇ ಈ ಘಟನೆ ನಡೆದಿದ್ದು, ವೃತ್ತಿಯಿಂದ ಬಡಗಿಯಾಗಿರುವ ಶಿವಕುಮಾರ್ ಬೈರತಿ ಸುರೇಶ್ ಅವರ ಮನೆ ಪಕ್ಕದಲ್ಲಿಯೇ ವಾಸವಾಗಿದ್ದು, ಆತನ ತಾಯಿ ಶಾಸಕರ ಮನೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.
ಆತನನ್ನು ಚಿಕ್ಕಮಗುವಿನಿಂದ ನೋಡುತ್ತಿದ್ದೇನೆ. ಆತನ ತಾಯಿ ನನ್ನ ಮನೆಯಲ್ಲಿಯೇ ಕೆಲಸ ಮಾಡುತ್ತಾರೆ. ನಮ್ಮ ಜತೆ ಆತ ಚೆನ್ನಾಗಿಯೇ ಇದ್ದ. ಅವರ ಕುಟುಂಬಕ್ಕೆ ಎಲ್ಲ ನೆರವುಗಳನ್ನು ನೀಡಿದ್ದೆವು, ಮನೆ ಕಟ್ಟಿಸಿಕೊಟ್ಟಿದ್ದೆವು. ಆದರೆ ಆತ ಏಕೆ ಈ ಪ್ರಯತ್ನ ನಡೆಸಿದ್ದಾನೆ ಎನ್ನುವುದು ಗೊತ್ತಾಗಿಲ್ಲ ಎಂದು ಬೈರತಿ ಸುರೇಶ್ ತಿಳಿಸಿದ್ದಾರೆ.
ಆರೋಪಿಯ ಬೈಕ್ ಮತ್ತು ಬೈರತಿಯ ಕಾರ್ ನಡುವೆ ಆಕಸ್ಮಾತ್ ನಡೆದಿದ್ದ ಅಫಘಾತವೇ ಕಾರಣವೆಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.

ಫ್ರೆಶ್ ನ್ಯೂಸ್

Latest Posts

Featured Videos