ಬಳ್ಳಾರಿ, ಜ. 11 : ಸಚಿವ ಸಂಪುಟ ವಿಸ್ತರಣೆ ಸಿಎಂ ಯಡಿಯೂರಪ್ಪಗೆ ಬಿಟ್ಟ ವಿಚಾರ ವಿಸ್ತರಣೆ ಖಚಿತ ಆದರೆ, ಯಾವಾಗ ಆಗುತ್ತೋ ಗೊತ್ತಿಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರು ತಿಳಿಸಿದ್ದಾರೆ.
ಶನಿವಾರ ಹಂಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಉಪ ಚುನಾವಣೆ ನಂತರ ಜಾರ್ಖಂಡ್, ದೆಹಲಿ ಚುನಾವಣೆ ನಡೆಯುತ್ತಿವೆ. ಬಹುಶಃ ದೆಹಲಿ ಚುನಾವಣೆ ನಂತರ ಆಗಬಹುದು. ಬಜೆಟ್ಗೂ ಒಳಗೆ ಆಗುತ್ತದೆ, ಮಾರ್ಚ್ 02ರೊಳಗೆ ಆಗಬಹುದು ಎಂದರು.
ಇನ್ನು ಕೆಲವೊಮ್ಮೆ ತಪ್ಪು ಸುದ್ದಿಗಳು ಹಬ್ಬುತ್ತದೆ. ನಾನು ಮಂತ್ರಿಸ್ಥಾನ ಕೇಳಿರಲಿಲ್ಲ, ನನ್ನ ನಿರೀಕ್ಷೆ ಬೇರೆ ಇತ್ತು. ನನಗೆ ಸಿಎಂ ಸಚಿವ ಸ್ಥಾನ ನೀಡಿದ್ದಾರೆ. ಏನೇ ಮಾಡಿ, ಒಳ್ಳೆಯ ಕೆಲಸ ಮಾಡಿ ಅಂದಿದ್ದಾರೆ ನಾನು ಮಾಡುತ್ತಿದ್ದೇವೆ ಎಂದು ಹೇಳಿದರು.
ಜೋಶ್ನಲ್ಲಿ ಹೌದೋ ಹುಲಿಯಾ ಎಂದ ಸಿಟಿ ರವಿ
ಹಂಪಿ ಉತ್ಸವದ ಅಂಗವಾಗಿ ಗುಂಡು ಕಲ್ಲು ಎತ್ತುವ ಕಾರ್ಯಕ್ರಮದಲ್ಲಿ ವೇಳೆ ಗುಂಡು ಎತ್ತುವ ಸ್ಪರ್ಧೆಗೆ ಹೇಯ್…ಒಹೋ…ಒಹೋ…ಹೌದೋ ಹುಲಿಯ ಎಂದು ಪ್ರೋತ್ಸಾಹ ನೀಡಿದರು.