ಬೆಂಗಳೂರು : ಸರ್ಕಾರಿ ವೈದ್ಯರು ಖಾಸಗಿಯಾಗಿ ಪ್ರಾಕ್ಟಿಸ್ ಮಾಡಿದರೆ ಅವರನ್ನು ಸರ್ಕಾರಿ ಸೇವೆಯಿಂದ ವಜಾ ಮಾಡುವುದಾಗಿ ಆರೋಗ್ಯ ಸಚಿವ ವಿ. ಶ್ರಿರಾಮುಲು ಎಚ್ಚರಿಕೆ ನೀಡಿದರು.
ವಾಲ್ಮಿಕಿ ಸಮುದಾಯ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ವಾಲ್ಮಿಕಿ ಸಮುದಾಯದ ಸ್ವಾಮೀಜಿ ಹಾಗೂ ಮುಖಂಡರ ನಿಯೋಗ ಸಿಎಂ ಯಡಿಯೂರಪ್ಪನವರನ್ನು ಅವರ ಗೃಹ ಕಚೇರಿ ಕಷ್ಣಾದಲ್ಲಿ ಭೇಟಿ ಮಾಡಿದ ನಂತರ ಸುದಿಗಾರೊಂದಿಗೆ ಮಾತನಾಡಿ, ಸರ್ಕಾರಿ ಆಸ್ಪತ್ರೆಯ ವೈದ್ಯರು ಖಾಸಗಿ ಕ್ಲಿನಿಕ್ ಗಳನ್ನು ತೆರೆದು ಪ್ರಾಕ್ಟಿಸ್ ಮಾಡಿದರೆ ಅವರನ್ನು ಮುಲಾಜಿಲ್ಲದೆ ಸೇವೆಯಿಂದ ವಜಾ ಮಾಡುವುದಾಗಿ ಗುಡುಗಿದರು.