ಸ್ವಯಂ ಪ್ರೇರಣೆಯಿಂದ ಬಂದ್ ಯಶಸ್ವಿ

ಸ್ವಯಂ ಪ್ರೇರಣೆಯಿಂದ ಬಂದ್ ಯಶಸ್ವಿ

ಕೋಲಾರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಹೋರಾಟಗಳಿಗೆ ಮನ್ನಣೆ ನೀಡದ ಕಾರಣ ವಿವಿಧ ಪ್ರಗತಿಪರ ಸಂಘಟನೆಗಳು ಸೋಮವಾರದ ಬಂದ್‌ಗೆ ಕರೆ ನಿಡಿದ್ದ ಹಿನ್ನಲೆ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ರೈತರಿಗೆ ಮತ್ತು ಕಾರ್ಮಿಕರಿಗೆ ಬೆಂಬಲ ನೀಡಿ ಬಂದ್ ಯಶಸ್ವಿಗೊಳಿಸಿದರು .
ನಗರದಲ್ಲಿ ಅಂಗಡಿ ಮುಂಗಟ್ಟುಗಳನ್ನು ವರ್ತಕರು ಸ್ವಯಂ ಪ್ರೇರಿತರಾಗಿ ಮುಚ್ಚಲಾಗಿತ್ತು. ಬಸ್ ಸಂಚಾರ ಸ್ಥಗಿತಗೊಂಡು ನಿಲ್ದಾಣ ಖಾಲಿಖಾಲಿಯಾಗಿತ್ತು ಬಂದ್ ಮದ್ಯಯೂ ನಶೆ ಪ್ರಿಯರು ಮದ್ಯಪ್ರಿಯರಾಗಿದ್ದು ಅಲ್ಲಲ್ಲಿ ಕಂಡು ಬಂತು .
ಕಾಂಗ್ರಸ್‌ನ ಕಿಸಾನ್ ಕೇತ್ ಜಿಲ್ಲಾದ್ಯಕ್ಷ ಊರುಬಾಗಿಲು ಶ್ರೀನಿವಾಸ್ ಕಾಂಗ್ರೆಸ್ ಪರ ನೇತೃತ್ವವಹಿಸಿ ಬಂದ್‌ನ ರ‍್ಯಾಲಿಯಲ್ಲಿ ಬಾಗವಹಿಸಿ ಮಾತನಾಡಿದ ಅವರು ಇಷ್ಟು ವರ್ಷಗಳು ಕಾಂಗ್ರಸ್ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅವದಿಯಲ್ಲಿ ಎಂದಿಗೂ ರೈತರ ಹಾಗೂ ಕಾರ್ಮಿಕರ ವಿರೋದ ಮಾಡಿಲ್ಲ. ರಾಜ್ಯ ಹಾಗೂ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರಗಳು ದೇಶದ ಬೆನ್ನುಲುಬಾಗಿರುವ ಅನ್ನ ನೀಡುವ ರೈತರಿಗೆ ಮಣ್ಣು ನೀಡುವ ಕೆಲಸಕ್ಕೆ ಮುಂದಾಗಿದೆ ಇದು ದೇಶದ ಅಬಿವೃದ್ದಿಗೆ ವಿರೋದವಾಗಿದೆ ಭೂ-ಸುದಾರಣೆ ಮತ್ತು ಎಪಿಎಂಸಿ ಕಾಯ್ದೆಗಳು ಜನರ ವಿರುದ್ದವಾಗಿದೆ ಎಂದು ಕಿಡಿಕಾರಿದರು .

ಫ್ರೆಶ್ ನ್ಯೂಸ್

Latest Posts

Featured Videos