ಪತ್ರಕರ್ತರ ಸಂಘದ ಸದಸ್ಯರ ಆಯ್ಕೆ

ಪತ್ರಕರ್ತರ ಸಂಘದ ಸದಸ್ಯರ ಆಯ್ಕೆ

ಮಾಲೂರು: ತಾಲೂಕು ಕೇರಾ ಪತ್ರಕರ್ತರ ಸಂಘದ ಜಿಲ್ಲಾ ಕರ‍್ಯಕಾರಿ ಸಮಿತಿ ಸದಸ್ಯರಾಗಿ ಅರಳೇರಿ ಜಿ.ನಾರಾಯಣಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ.
ಕೋಲಾರ ಜಿಲ್ಲೆಯ ವೇಮಗಲ್ ಹೋಬಳಿಯ ಸ್ತ್ರೀ ಶಕ್ತಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ಜಿಲ್ಲಾ ಮಟ್ಟದ ಸರ್ವ ಸದಸ್ಯರ ಸಭೆಯಲ್ಲಿ ಜಿಲ್ಲಾ ಕರ‍್ಯಕಾರಿ ಸಮಿತಿ ಸದಸ್ಯರಾಗಿ ರಾಜ್ಯ ಉಪಾಧ್ಯಕ್ಷ ವಿ.ರಾಜ್‌ಗೋಪಾಲ್, ಜಿಲ್ಲಾಧ್ಯಕ್ಷ ಎನ್.ಪಾಲ್ಗುಣ ಅವರು ಅರಳೇರಿ ಜಿ.ನಾರಾಯಣಸ್ವಾಮಿ ಅವರನ್ನು ಆಯ್ಕೆ ಮಾಡಿ ಘೋಷಿಸಿಲಾಯಿತು.
ಜಿಲ್ಲಾ ಸರ್ವ ಸದಸ್ಯರ ಸಭೆಯಲ್ಲಿ ಮಾಲೂರು ತಾಲೂಕಿನ ಜಿ.ನಾರಾಯಣಸ್ವಾಮಿ ಅವರನ್ನು ಜಿಲ್ಲಾ ಕರ‍್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದ ಹಿನ್ನೆಯಲ್ಲಿ ಮಾಲೂರು ತಾಲೂಕು ಕೇರಾ ಸಂಘದ ತಾಲೂಕು ಅಧ್ಯಕ್ಷ ಪಿ.ಎನ್.ದಾಸ್ ನೇತೃತ್ವದಲ್ಲಿ ಪಧಾಧಿಕಾರಿಗಳು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕೇರಾ ಪತ್ರಕರ್ತರ ಸಂಘದ ಜಿಲ್ಲಾ ಕರ‍್ಯಕಾರಿ ಸಮಿತಿ ಸದಸ್ಯ ಪಿ.ಪ್ರಕಾಶ್, ಗೌರವಾಧ್ಯಕ್ಷರಾದ ಎಸ್.ಮಹದೇವ್ ಪಾಂಚಾಲ್, ವೈ.ಸಿ.ರಾಮಕೃಷ್ಣ, ಕಾರ್ಯಾದ್ಯಕ್ಷ ಕೇಶವ್, ಉಪಾಧ್ಯಕ್ಷ ಚಿಕ್ಕಇಗ್ಗಲೂರು ಆರ್.ಪ್ರವೀಣ್, ಪ್ರಧಾನ ಕರ‍್ಯದರ್ಶಿ ಎಂ.ಎನ್.ಮನೋಹರ್, ಖಜಾಂಚಿ ಎನ್.ಸಂತೋಷ್, ಸದಸ್ಯರಾದ ಇನಾಯಿತ್, ಎನ್.ವಿನೋದ್, ಸೋಮಶೇಖರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos