ನವದೆಹಲಿ: 22 ವರ್ಷದ ನಂತರದಲ್ಲಿ ಲೋಕಸಭೆಯಲ್ಲಿ ಭದ್ರತಾ ಲೋಪ ಉಂಟಾಗಿದೆ. ವಿಧಾನಸಭೆಯಲ್ಲಿ ರಾಜ ನಾಯಕರು ಗಂಭೀರವಾದ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಸಂಸತ್ನಲ್ಲಿಮತ್ತೊಮ್ಮೆ ಭದ್ರತಾ ವೈಫಲ್ಯ ಉಂಟಾಗಿದೆ. ಲೋಕಸಭೆ ಕಲಾಪ ನಡೆಯುತ್ತಿದ್ದಾಗಲೇ ಇಬ್ಬರಿಂದ ದಾಳಿ ನಡೆಸಲಾಗಿದೆ. ಗ್ಯಾಲರಿಯಿಂದ ಕಲಾಪಕ್ಕೆ ಧುಮುಕಿ ದಾಳಿಕೋರರು ಆತಂಕ ಸೃಷ್ಟಿಸಿದ್ದಾರೆ. ಸಂಸದರು ಕೂರುವ ಚೇರ್, ಟೇಬಲ್ಗಳ ಮೇಲೆ ಓಡಾಡಿದ ಆರೋಪ ಸಹ ಇದೆ.
ಸ್ಮೋಕ್ ಬಾಂಬ್ ಸ್ಪೋಟಿಸಿ ಆತಂಕವನ್ನು ದಾಳಿಕೋರರು ಸೃಷ್ಟಿಸಿದ್ದಾರೆ. ಬಳಿಕ ದಾಳಿಕೋರನನ್ನು ಸಂಸದರು ಮತ್ತು ಲೋಕಸಭಾ ಸಿಬ್ಬಂದಿ ಸುತ್ತುವರಿದ್ದಾರೆ. ಲೋಕಸಭಾ ಗ್ಯಾಲರಿಯಲ್ಲಿದ್ದ ಮತ್ತೊಬ್ಬನಿಂದ ಸರ್ಕಾರದವಿರುದ್ಧ ಘೋಷಣೆ ಕೂಗಲಾಗಿದೆ. ದಾಳಿ ಮಾಡಿದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ದುಷ್ಕರ್ಮಿಗಳು ಲೋಕಸಭೆ ಒಳಗಡೆ ನುಗ್ಗಿದ್ದಾರೆ ಇದರ ಬಗ್ಗೆ ನಾವು ಎಚ್ಚರಿಕೆ ವಹಿಸಬೇಕು ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ ಪಾಸ್ ಕೊಡುವಾಗ ನೋಡಿಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿದ್ದಾರೆ.