ಬೈಕಿನಿಂದ ಬಿದ್ದು ಪ್ರಾಣ ಬಿಟ್ಟ ಶಿಕ್ಷಕಿ

ಬೈಕಿನಿಂದ ಬಿದ್ದು ಪ್ರಾಣ ಬಿಟ್ಟ ಶಿಕ್ಷಕಿ

ಹಾವೇರಿ, ಅ. 31 : ಚಲಿಸುತ್ತಿದ್ದ ಬೈಕ್ ಮೇಲಿಂದ ಬಿದ್ದು ಪತಿಯ ಕಣ್ಣೆದುರಲ್ಲೇ ಶಿಕ್ಷಕಿಯೊಬ್ಬಳು ಪ್ರಾಣಬಿಟ್ಟಿರುವ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಗಂಗಾಜಲ ತಾಂಡಾ ಬಳಿ ನಡೆದಿದೆ. ಮೃತ ಶಿಕ್ಷಕಿಯನ್ನು ಲೀಲಾವತಿ ಕಟಿಗೇರ (33) ಎಂದಿನಂತೆ ಶಾಲೆಗೆ ತೆರಳುತ್ತಿದ್ದ ಹಿನ್ನಲೆ ವೇಳೆ ಬೈಕ್ ಮೇಲಿಂದ ಬಿದ್ದು ಶಿಕ್ಷಕಿ ಈ ಮೃತ ಪಟ್ಟಿದ್ದಾಳೆ. ಇವರು ಮೆಡ್ಲೇರಿ ಗ್ರಾಮದಲ್ಲಿರು ಬೀರೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆ ಲೀಲಾವತಿ ಅವರು ತಮ್ಮ ಗಂಡ ಬಸವರಾಜು ಜೊತೆ ಬೈಕ್ ನಲ್ಲಿ ಶಾಲೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಶಾಲೆಗೆ ತಡವಾಗಿತ್ತು ಎಂದು ವೇಗವಾಗಿ ಹೋಗುತ್ತಿದ್ದಾಗ ಬೈಕ್ ರಸ್ತೆಯಲ್ಲಿದ್ದ ಉಬ್ಬನ್ನು ಜಂಪ್ ಮಾಡಿದೆ. ಈ ವೇಳೆ ಬ್ಯಾಲೆನ್ಸ್ ತಪ್ಪಿದ ಲೀಲಾವತಿಯವರು ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯವಾದ ಕಾರಣ ಸಾವನ್ನಪ್ಪಿದ್ದಾರೆ.ರಾಣೇಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos