ಬೆಂಗಳೂರು, ಜೂನ್. 11, ನ್ಯೂಸ್ ಎಕ್ಸ್ ಪ್ರೆಸ್: ‘’ಸಾವಿನ ಸಂಭ್ರಮ ಕೊಲೆಯಷ್ಟೇ ಘೋರವೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ.
ಮಾಜಿಮುಖ್ಯಮಂತ್ರಿ ಟ್ವೀಟ್ ಮೂಲಕ ಖಂಡಿಸಿ, ಜ್ಞಾನಪೀಠ ಪುರಸ್ಕೃತ ಹಾಗೂ ನಾಟಕಕಾರ ಮತ್ತು ರಂಗಕರ್ಮಿ ಗಿರಿಶ್ ಕಾರ್ನಾಡ್ ಹಲವು ದಿನಗಳ ಕಾಲ ಆರೋಗ್ಯ ಸಮಸ್ಯೆ ಹಿನ್ನಲೆ ಅವರು ಕೊನೆಯುಸಿರೆಳೆದರು. ಅವರ ಸೈದ್ಧಾಂತಿಕ ವಿರೋಧಿಗಳು ಅವರ ಸಾವನ್ನು ಸಂಭ್ರಮಿಸಿದ್ದರು. ಸಾಹಿತಿ, ವಿಚಾರವಾದಿ, ನಾಟಕಕಾರ ಗಿರೀಶ್ ಕಾರ್ನಾಡ್ ಅವರ ಸಾವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಸಂಭ್ರಮಿಸಿದ್ದ ವಿಕೃತ ಮನಸ್ಥಿತಿಗಳ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿದ್ದಾರೆ. “ಸಾವಿನ ಸಂಭ್ರಮ ಕೊಲೆಯಷ್ಟೇ ಘೋರ ಕೃತ್ಯ” ಎಂದು ಖಂಡಿಸಿದ್ದಾರೆ.