ಸತ್ಯಕ್ಕೆ ಜಯ ಸಿಗಲಿದೆ : ಡಿಕೆ ಸುರೇಶ್

ಸತ್ಯಕ್ಕೆ ಜಯ ಸಿಗಲಿದೆ : ಡಿಕೆ ಸುರೇಶ್

ಬೆಂಗಳೂರು, ಅ. 8 : ಅಕ್ರಮ ಹಣ ವರ್ಗಾವಣೆ ಹಿನ್ನಲೆ ಜೈಲು ಸೇರಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಕುರಿತು ಇಂದು ಸಂಸದ ಡಿ.ಕೆ ಸುರೇಶ್ ಟ್ವೀಟ್ ಮಾಡಿ, ವಿಜಯದಶಮಿಯಂದು ಸತ್ಯಕ್ಕೆ ಜಯ ಸಿಗುತ್ತದೆ ಎಂದಿದ್ದಾರೆ.
ರಾಜಕೀಯ ಪಿತೂರಿಯಿಂದ ನಮ್ಮ ಕುಟುಂಬದ ಮೇಲೆ ದಾಳಿ ಆಗಿದೆ. ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯದ ಎಲ್ಲಾ ವಿಚಾರಣೆಯನ್ನು ಎದುರಿಸಿ, ವಿಜಯದಶಮಿ ದಿನದಂದು ಆರೋಪ ಮುಕ್ತರಾಗಿ ಹೊರಬರುವ ಆತ್ಮವಿಶ್ವಾಸವನ್ನು ತಾಯಿ ಚಾಮುಂಡೇಶ್ವರಿ ನೀಡಿರುವುದರಿಂದ ಸತ್ಯಕ್ಕೆ ಜಯ ಸಿಗಲಿದೆ ಎಂದು ಸಂಸದ ಡಿಕೆ ಸುರೇಶ್ ಅವರು ಟ್ವೀಟ್ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos