ಸಂತ್ರಸ್ಥರ ಸಹಾಯಕ್ಕೆ ಯಾರು ಇಲ್ಲವೆ

ಸಂತ್ರಸ್ಥರ ಸಹಾಯಕ್ಕೆ ಯಾರು ಇಲ್ಲವೆ

ಬೆಂಗಳೂರು, ಆ. 13 : ಚುನಾವಣೆಯಲ್ಲಿ ಗೆದ್ದ ನಂತರ ಶಾಸಕರಾಗಲಿ, ಸಂಸದರಾಗಲಿ ತಮ್ಮಗೆ ಬೇಕಾದ ಸಚಿವ ಸಂಪುಟಗಳಿಕೆ ಕಾದಾಟ ಮಾಡುತ್ತಾರೆ. ರಾಜಕಾರಣಿಗಳು ಕಷ್ಟದಲ್ಲಿರುವ ಜನರನ್ನು ಸ್ಪಂಧಿಸುವ ಕಾರ್ಯ ವಿರಳ. ತಮ್ಮ ಹಿತವನ್ನು ಕಾಪಾಡಕೊಳ್ಳುವುದು ಈಗ ರಾಜ್ಯದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ರಾಜ್ಯದಿಂದ ಕೇಂದ್ರಕ್ಕೆ ಸಂಸದರನ್ನು ಕಳುಹಿಸಿಕೊಟ್ಟಿದ್ದರು ಇಷ್ಟೂ ಮಂದಿ ಸಂಸದರು ರಾಜ್ಯದಲ್ಲಿ ಭೀಕರವಾಗಿ ಕಾಡುತ್ತಿರುವ ನೆರೆ ಬಗ್ಗೆ ಪ್ರಧಾನಿ ಮೋದಿವಯರನ್ನು ಭೇಟಿಯಾಗಿ ಮನವಿ ಸಲ್ಲಿಸುವುದಕ್ಕೆ ಹಿಂದೇಟು ಹಾಕುತ್ತಿರುವುದಕ್ಕೆ ರಾಜ್ಯದ ಜನತೆ ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡುತ್ತಿದ್ದಾರೆ.
ಕೇಂದ್ರ ಗೃಹ ಸಚಿವ ನಿರ್ಮಲಾ ಸೀತಾರಾಮನ್ ಹಾಗೂ ಅಮಿತ್ ಶಾ ಅವರು ವೈಮಾನಿಕ ಸಮೀಕ್ಷೆ ನಡೆಸಿ ಹೋಗಿದ್ದಾರೆ. ಇಲ್ಲಿ ತನಕ ಯಾವುದೇ ರೀತಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡದೇ ಇರುವುದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಿಎಂ ಬಿಎಸ್ವೈ ಅವರು ಕೇಂದ್ರದ ಬಳಿ ಹಣಕಾಸಿ ನೆರವು ಕೇಳಿಕೊಳ್ಳುವುದಕ್ಕೆ ಬದಲಾಗಿ ರಾಜ್ಯದ ಜನರ ಬಳಿ ಮನವಿ ಮಾಡಿಕೊಂಡಿದ್ದು ಯಾಕೆ ಅಂತ ಜನತೆ ಪ್ರಶ್ನೆ ಮಾಡುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos