ಬೆಂಗಳೂರು, ಮೇ.9,ನ್ಯೂಸ್ ಎಕ್ಸ್ ಪ್ರೆಸ್: ”ಸಿಎಂ ಆಗಲು ಯಾವ ಮಾರ್ಗವೂ ಇಲ್ಲ. ಈಗ ಸಿಎಂ ಆಗಲು ಅವಕಾಶ ಇಲ್ಲ, ಮುಂದೆ ನೋಡೋಣ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಅಭಿಪ್ರಾಯಪಟ್ಟರು.
ರಮೇಶ್ ಜಾರಕಿಹೊಳಿ ಬಂಡಾಯ ವಿಚಾರಕ್ಕೆ ಸಂಬಂಧಪಟ್ಟಂತೆ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು,” ನಮ್ಮ ವರಿಷ್ಠರು ಸಂಧಾನ ಮಾಡ್ತಾರೆ. ರಮೇಶ್ ಮಾತುಕತೆ ಮಾಡಲಿಕ್ಕೆ ಪ್ರಯತ್ನ ಮಾಡಬಹುದು. ಅವರೇ ರಾಜೀನಾಮೆ ಕೊಡ್ತೀನಿ ಅಂತ ಹೇಳಿದ್ದರು. ಅವರೇ ಅದಕ್ಕೆ ಪ್ರತಿಕ್ರಿಯೆ ನೀಡ್ತಾರೆ ಎಂದರು. ನಂತರ ಸಿಎಂ ಆಗುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈಗ ಸಿಎಂ ಆಗಲು ಅವಕಾಶ ಇಲ್ಲ. ಆದರೆ, ಮುಂದಿನ ಅವಧಿಯಲ್ಲಿ ನೋಡೋಣ ಎಂದರು.