ಬೆಳಗಾವಿ, ಮೇ. 13, ನ್ಯೂಸ್ ಎಕ್ಸ್ ಪ್ರೆಸ್: ಸತೀಶ್ ಜಾರಕಿಹೊಳಿ ಮಹತ್ವದ ಸುಳಿವು ನೀಡಿದ್ದಾರೆ. ಆಪರೇಷನ್ ಕಮಲಕ್ಕೆ ಪ್ರತಿಯಾಗಿ ಆಪರೇಷನ್ ಹಸ್ತದ ಬಗ್ಗೆ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಅತೃಪ್ತ ನಾಯಕ ರಮೇಶ್ ಜಾರಕಿಹೊಳಿ ಜೊತೆಗೆ ಹಲವು ಶಾಸಕರಿದ್ದಾರೆ, ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ.
ಅವರು ಆಪರೇಷನ್ ಮಾಡಿದರೆ ಪ್ರತಿಯಾಗಿ ಆಪರೇಷನ್ ಮಾಡಲು ಜೆಡಿಎಸ್-ಕಾಂಗ್ರೆಸ್ ಗೂ ಶಕ್ತಿ ಇದೆ. ಸಮಯ ಬಂದಾಗ ನಮ್ಮ ಸಂಖ್ಯಾ ಬಲವನ್ನೂ ಕೂಡ ನಾವು ತೋರಿಸುತ್ತೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಇನ್ನು ಲೋಕಸಭಾ ಚುನಾವಣೆಯ ಬಗ್ಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಯಾವುದೇ ರೀತಿಯಿಂದಲೂ ಕೂಡ ಬಿಜೆಪಿಗೆ ಹೆಚ್ಚಿನ ಮೆಜಾರಿಟಿ ಬರುತ್ತದೆ ಎಂದು ಹೇಳಿಲ್ಲ ಎಂದರು.