ಮೈಸೂರು, ಅ. 20 : ಸಾಂಸ್ಕೃತಿಕ ನಗರಿಯಲ್ಲಿ ರೌಡಿಗಳ ಪುಂಡಾಟಿಕೆ ನಡೆದಿದ್ದು, ಪೊಲೀಸ್ ಕಾನ್ಸ್ಟೇಬಲ್ ಮೇಲೆ ರೌಡಿ ಶೀಟರ್ ಒಬ್ಬ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಅಂಗಡಿ ಮುಚ್ಚುವ ವಿಷಯಕ್ಕೆ ರೌಡಿಶೀಟರ್ ಸೋಮ ಮತ್ತು ಕಾನ್ಸ್ಟೇಬಲ್ ಮಂಜುನಾಥ್ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೊನೆಗೆ ರೌಡಿ ಶೀಟರ್ ಪೊಲೀಸ್ ಸಿಬ್ಬಂದಿಯನ್ನೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ರೌಡಿ ಶೀಟರ್ ಸೋಮ ಅವರ ಸಹೋದರಿ ಲತಾ ಅಂಗಡಿ ನಡೆಸುತ್ತಿದ್ದರು. ಅಂಗಡಿ ಬಾಗಿಲು ಮುಚ್ಚಿರಲಿಲ್ಲ. ಹಿನ್ನೆಲೆ ಕಾನ್ಸ್ಟೇಬಲ್ ಮಂಜುನಾಥ್ ಅಂಗಡಿ ಬಾಗಿಲು ಮುಚ್ಚುವಂತೆ ತಿಳಿಸಿದ್ದಾರೆ.