ಕೃಷ್ಣರಾಜಪುರ, ಅ. 2: ಸ್ವತಂತ್ರ ಭಾರತಕ್ಕಾಗಿ ತನ್ನ ಜೀವವನ್ನೇ ಮುಡುಪಾಗಿಟ್ಟ ಮಹಾತ್ಮಾ ಗಾಂಧೀಜಿಯವರ ಜನ್ಮದಿನದ ಅಂಗವಾಗಿ ಕೆ.ಆರ್ ಪುರ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಉಚಿತವಾಗಿ ಹಣ್ಣುಹಂಪಲನ್ನು ಜೆಡಿಎಸ್ ಸಂಭಾವ್ಯ ಅಭ್ಯರ್ಥಿ ಸಿ.ಕೃಷ್ಣಮೂರ್ತಿ ಅವರು ವಿತರಿಸಿದರು.
ಕೆಆರ್ ಪುರ ಕ್ಷೇತ್ರದ ಸಾರ್ವಜನಿಕರ ಆಸ್ಪತ್ರೆ ಒಳರೋಗಿಗಳಿಗೆ ಹಣ್ಣುಹಂಪಲನ್ನು ವಿತರಿಸಿ ಮಾತನಾಡಿದ ಅವರು, ಭಾರತೀಯರಾದ ನಾವು ಈ ದಿನ ಮಹಾತ್ಮರಾದ ಬಾಬುಜಿಯವರನ್ನು ನೆನೆಯಬೇಕಾಗಿದೆ ಅವರ ಉಪವಾಸ ಸತ್ಯಾಗ್ರಹ, ಮಾಡು ಇಲ್ಲವೇ ಮಡಿ ಎಂಬ ಅದೆಷ್ಟೋ ಪ್ರತಿಭಟನೆಗಳಿಗೆ ಬಿಂಬಿತರಾಗಿದ್ದಾರೆ ಎಂದು ತಿಳಿಸಿದರು.
ಹಾಗಾಗಿ ಅವರ ಹುಟ್ಟು
ಹಬ್ಬವನ್ನು ಆಸ್ಪತ್ರೆಯಲ್ಲಿರುವ ರೋಗಿಗಳ ಯೋಗಕ್ಷೇಮವನ್ನು ವಿಚಾರಿಸಿ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದ್ದೆವೆ.
ಈಗಿನ ಯುವಜನತೆ ಮಹತ್ಮರನ್ನು ನೆನೆಯುವ ದಿನದಲ್ಲೂ ಸಾಮಾಜಿಕ ಜಾಲತಾಣಗಳ ಮೂಲಕ ಅವರಿಗೆ ಗೌರವ, ದೇಶಭಕ್ತಿಯನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಕ್ಷೇತ್ರದ ಜೆಡಿಎಸ್ ಅದ್ಯಕ್ಷ ಡಿ.ಎ.ಸು
ರೇಶ್ ಮಾತನಾಡಿ, ಯುವಕ ಯುವತಿಯರು ಗಾಂಧಿಯವರ ತತ್ವ, ಆದರ್ಶ ತಿಳಿದಿಕೊಂಡು ಸಮಾಜಕ್ಕೆ ಹಾಗೂ ದೇಶಕ್ಕೆ ಕೀರ್ತಿ ತರಬೇಕು. ಗಾಂಧಿ ಜಯಂತಿಯನ್ನು ಆಚರಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ, ಗಾಂಧೀಜಿ ಕಂಡ ಕನಸ್ಸಿನ ಸ್ವಚ್ಛ ಭಾರತ ಹಾಗೂ ಬಡತನ ನಿರ್ಮೂಲನೆ, ಆಹಿಂಸೆ ಯತಂಹ ಸಮಸ್ಯೆಗಳನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಕೃಷ್ಣಮೂರ್ತಿ, ಮುಖಂಡರಾದ ಹನುಮಂತು, ಶಂಕರ್, ನಾಗೇಶ್, ಜಬಿವುಲ್ಲಾ, ಫಯಾಜ್, ಚನ್ನಪ್ಪ, ಮಧು, ಶಮಲಾ ದೇವಿ, ಜ್ಯೋತಿ, ಶಶಿಕಲಾ, ರುದ್ರೇಶ್, ಲೀಲಾವತಿ, ಮಂಜುಳಾ, ಪ್ರಕಾಶ್ ಸೇರಿದಂತೆ ಹಾಜರಿದ್ದರು.