ಸರಿಗಮಪ ಗಾಯಕ ಹನುಮಂತಣ್ಣನ ಚುನಾವಣೆಯತ್ತ

ಸರಿಗಮಪ ಗಾಯಕ ಹನುಮಂತಣ್ಣನ ಚುನಾವಣೆಯತ್ತ

ಬೆಂಗಳೂರು, . 3, ನ್ಯೂಸ್ ಎಕ್ಸ್ ಪ್ರೆಸ್: ಹಾವೇರಿ ಜಿಲ್ಲೆಯ ಹನುಮಂತ ಜೀ ಕನ್ನಡ ಸರಿಗಮಪ ಸ್ಪರ್ಧೆ ಮುಖಾಂತರ ರಾಜ್ಯಾದ್ಯಂತ ಮನೆ ಮಾತಾದ ಹಳ್ಳಿ ಹೈದ ಹನುಮಂತಪ್ಪ ಈಗ ಚುನಾವಣೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದಾರೆ.

ಹನುಮಂತಪ್ಪ ಮಾತ್ರವಲ್ಲದೆ, ಬಿಗ್ ಬಾಸ್ 5 ವಿನ್ನರ್ ರ್ಯಾಪರ್ ಚಂದನ್ ಶೆಟ್ಟಿ, ಗಾಯಕಿ ಸವಿತಕ್ಕ,  ಅರ್ಚನಾ ಉಡುಪ ಮುಂತಾದವರೂ ಚುನಾವಣಾ ಆಯೋಗದ ಪರವಾಗಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದಾರೆ.

ಹನುಮಂತಪ್ಪ ವಿಶೇಷವಾಗಿ ಹಾವೇರಿ ಜಿಲ್ಲೆಯಲ್ಲಿ ಮತದಾರರಿಗೆ ಚುನಾವಣೆ ಬಗ್ಗೆ ಜಾಗೃತಿ ಸಂದೇಶ ನೀಡಲು ಆಯೋಗದ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ತಮ್ಮ ಮುಗ್ಧ ಶೈಲಿಯಿಂದ ಮನೆ ಮಾತಾಗಿರುವ ಹನುಮಂತಪ್ಪ ಮತದಾರರ ಮೇಲೂ ಅಷ್ಟೇ ಪರಿಣಾಮ ಬೀರಬಹುದು ಎಂಬುದು ಚುನಾವಣಾ ಆಯೋಗದ ಲೆಕ್ಕಾಚಾರ.

ಫ್ರೆಶ್ ನ್ಯೂಸ್

Latest Posts

Featured Videos