ಬೆಂಗಳೂರು: ಸಂಕ್ರಾಂತಿ ಸಂಭ್ರಮಕ್ಕೆ ಕೌನ್ ಶುರುವಾಗಿದೆ. ಸಿಲಿಕಾನ್ ಸಿಟಿ ಜನರು ಭರ್ಜರಿಯಾಗಿ ತಯಾರಿ ನಡೆಸುತ್ತಿದ್ದಾರೆ. ಎಳ್ಳು ಬೆಲ್ಲ ಬೀರಲು ರೆಡಿಯಾಗ್ತಿದ್ದಾರೆ. ನಗರದ ಮಂದಿ ಹಬ್ಬದ ಖರೀದಿಗೆ ಮುಂದಾಗಿದ್ದಾರೆ. ಬಣ್ಣ ಬಣ್ಣದ ಮಡಿಕೆ, ವಿಭಿನ್ನ ಆಕಾರದ ಬೆಲ್ಲದ ಹಚ್ಚು, ಎಳ್ಳು ,ಜೀರಿಗೆ, ಆದರೆ ಬೆಲೆ ಏರಿಕೆ ಬಿಸಿಗೆ ಕಂಗಾಲಾಗಿದ್ದಾರೆ.
ಸಂಕ್ರಾಂತಿಗೆ ದಿನಗಣನೆ ಶುರುವಾಯಿತು ಖರೀದಿಯ ಭರಾಟೆ. ದುಬಾರಿ ಆಯ್ತು ಎಳ್ಳು ಬೆಲ್ಲ ಕೊಬ್ಬರಿಯಾ ದರ. ಹೌದು ಸಂಕ್ರಾಂತಿ ಎಂದರೇನು ಸಂಭ್ರಮ ಸಂಕ್ರಾಂತಿ ಎಳ್ಳು ಬೆಲ್ಲ ಕಬ್ಬನ್ನ ಮನೆಗೆ ಕೊಡುವುದು ರೂಢಿ. ಹೀಗಾಗಿ ಮಾರ್ಕೆಟ್ನಲ್ಲಿ ಎಳ್ಳು ಬೆಲ್ಲ ಖರೀದಿಸಲು ಹೋದವರು ವಸ್ತುಗಳ ಬೆಲೆ ಏರಿಕೆ ಕಂಡು ಶಾಕ್ ಆಗಿದ್ದಾರೆ. ಎಳ್ಳು ಬೆಲ್ಲದ ದರ ಆ ಮಟ್ಟಿಗೆ ಜಾಸ್ತಿಯಾಗಿದೆ.