‘ಸಾಯಿ ಬಾಬಾ’ ದರ್ಶನ ಪಡೆದ ‘ವಿರಾಟ್’ ಸೈನ್ಯ!

‘ಸಾಯಿ ಬಾಬಾ’ ದರ್ಶನ ಪಡೆದ ‘ವಿರಾಟ್’ ಸೈನ್ಯ!

ಮುಂಬೈ, ಮೇ.  22, ನ್ಯೂಸ್ ಎಕ್ಸ್ ಪ್ರೆಸ್:  ಇದೇ ತಿಂಗಳ ಮೇ 30ರಂದು ಇಂಗ್ಲೆಂಡ್​ನಲ್ಲಿ ನಡೆಯಲಿರೋ ಏಕದಿನ ವಿಶ್ವಕಪ್​ಗೆ, ಟೀಮ್ ಇಂಡಿಯಾ ಈಗಾಗಲೇ ಇಂಗ್ಲೆಂಡ್ ಪ್ರಯಾಣ ಬೆಳೆಸಿದೆ.  ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿ ಶಾಸ್ತ್ರಿ, ವಿಶ್ವಕಪ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ರು. ಆದ್ರೆ ಅದಕ್ಕೂ ಮುನ್ನ ಟೀಮ್ ಇಂಡಿಯಾ ಕೋಚಿಂಗ್ ಸ್ಟಾಫ್, ಶಿರಿಡಿಗೆ ಪ್ರಯಾಣ ಬೆಳೆಸಿ ಸಾಯಿ ಬಾಬಾ ದರ್ಶನ ಪಡೆಯಿತು.ಆಂಗ್ಲರ ನಾಡಲ್ಲಿ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡಿ, ವಿಶ್ವಕಪ್ ಗೆಲ್ಲಲಿ ಅಂತ ಪ್ರಾರ್ಥಿಸಿದ್ರು. ಮುಖ್ಯ ತರಬೇತುದಾರ ರವಿ ಶಾಸ್ತ್ರಿಗೆ, ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಸಾಥ್ ನೀಡಿದ್ರು.

ಫ್ರೆಶ್ ನ್ಯೂಸ್

Latest Posts

Featured Videos