ಸಾಹಿತಿ ಪ್ರೊ.ಕೆ.ಎಸ್. ಭಗವಾನ್ ಹೊಸ ಬಾಂಬ್

ಸಾಹಿತಿ ಪ್ರೊ.ಕೆ.ಎಸ್. ಭಗವಾನ್ ಹೊಸ ಬಾಂಬ್

ಮೈಸೂರು, ಸೆ. 18 : ಶ್ರೀರಾಮನ ಬಗ್ಗೆ ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಗೆ ಗ್ರಾಸವಾಗುವ ಹಿರಿಯ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಇನ್ನೇನು ದಸರಾ ಸಂಭ್ರಮಕ್ಕೆ ದಿನಗಣನೆ ಆರಂಭವಾಗುತ್ತಿದಂತೆ ಹೊಸ ಬಾಂಬ್ ಸಿಡಿಸಿದ್ದಾರೆ. ಮಹಿಷಾಸುರ ಕೆಟ್ಟವನಲ್ಲ, ಚಾಮುಂಡಿಬೆಟ್ಟದಲ್ಲಿನ ಪ್ರತಿಮೆಯನ್ನೇ ತೆರವುಗೊಳಿಸಿ ಎಂದು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಷಾಸುರ ಕೆಟ್ಟವನಾಗಿದ್ದರೆ ಅವನ ಹೆಸರಿನಲ್ಲಿ ಮಹಿಷ ಮಂಡಲ ಎಂದು ಏಕೆ ಕರೆಯುತ್ತಿದ್ದರು? ಮಹಿಷಾಸುರ ಜನಾನುರಾಗಿ ಅರಸನಾಗಿದ್ದ. ಅವನ ಹೆಸರಿನಲ್ಲಿ ಮೈಸೂರು ಪ್ರಖ್ಯಾತ. ಮಹಿಷನ ಪ್ರತಿಮೆ ಹೋಲುವ ಮನುಷ್ಯ ಇಡೀ ವಿಶ್ವದಲ್ಲೇ ಇಲ್ಲ. ಹಾಗಾಗಿ ಚಾಮುಂಡಿಬೆಟ್ಟದಲ್ಲಿರುವ ಮಹಿಷಾಸುರನ ಪ್ರತಿಮೆಯನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸದ್ಯ ಮಹಿಷಾಸುರನ ಪ್ರತಿಮೆ ಇರುವ ಸ್ಥಳದಲ್ಲಿ ಅದನ್ನು ತೆರವುಗೊಳಿಸಿದ ಬಳಿಕ ಬೌದ್ಧ ಭಿಕ್ಕುವಿನ ಪ್ರತಿಮೆ ಪ್ರತಿಷ್ಠಾಪಿಸಲು ಸರ್ಕಾರ ಮುಂದಾಗಬೇಕು. ಈ ಕೆಲಸ ಶೀಘ್ರವೇ ಆಗಲೇಬೇಕು ಎಂದು ಸರ್ಕಾರಕ್ಕೆ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos