ಸಹಕಾರಿ ಕಚೇರಿಗೆ ಮುತ್ತಿಗೆ

ಸಹಕಾರಿ ಕಚೇರಿಗೆ ಮುತ್ತಿಗೆ

ನರಗುಂದ, ಜೂ. 26 : ತಾಲೂಕಿನ ಚಿಕ್ಕನರಗುಂದದ ರೇವಣ ಸಿದ್ಧೇಶ್ವರ ಕುರಿ ಸಂಗೋಪನೆ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಅನುದಾನ ಹಾಗೂ ನಿಗಮದ ಲಕ್ಷಾಂತರ ರೂ.ಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಗ್ರಾಮದ ನೂರಾರು ಸದಸ್ಯರು, ಸಾರ್ವಜನಿಕರು ಸಂಘದ ಕಚೇರಿಗೆ ಮುತ್ತಿಗೆ ಹಾಕಿ ಕಾರ್ಯದರ್ಶಿ ಎಂ.ಎಸ್. ಕಲಹಾಳ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

2019 ರ ಜನವರಿ 22 ರಂದು ಸಂಘದ ವ್ಯಾಪ್ತಿಯ ಬೆನಕನಕೊಪ್ಪ, ಸಂಕಧಾಳ, ಹಿರೇಕೊಪ್ಪ, ಕುರುಗೋವಿನಕೊಪ್ಪ ಗ್ರಾಮಗಳ ಒಟ್ಟು 456 ಜನರಿಂದ ತಲಾ 125 ರೂ.ಗಳನ್ನು ಪಡೆದು ಹೊಸ ಷೇರು ಸದಸ್ಯರನ್ನು ನೋಂದಣಿ ಮಾಡಿಸಿಕೊಳ್ಳಲಾಗಿದೆ. ಆದರೆ, ಯಾರಿಗೂ ಯಾವುದೇ ದಾಖಲೆ ನೀಡಿಲ್ಲ. ಸರ್ಕಾರದ ಉಣ್ಣೆ ಉತ್ಪಾದಕರ ನಿಗಮದಿಂದ ನೀಡುವ ಮೂರು ತಿಂಗಳ ಉದ್ಯೋಗ ತರಬೇತಿ ಮತ್ತು ಪ್ರತಿ ತಿಂಗಳು ನೀಡುವ 4500 ರೂ. ಗೌರವಧನ, ಸ್ವಉದ್ಯೋಗ ಕೈಗೊಳ್ಳುವ ಸದಸ್ಯರಿಗೆ ಉಣ್ಣೆ ಮತ್ತು ನೇಯುವ ಯಂತ್ರಗಳನ್ನು ಕೊಟ್ಟಿಲ್ಲ ಎಂದು ದೂರಿದರು.

 

ಫ್ರೆಶ್ ನ್ಯೂಸ್

Latest Posts

Featured Videos