ಬೆಂಗಳೂರು, ಏ. 29, ನ್ಯೂಸ್ ಎಕ್ಸ್ ಪ್ರೆಸ್: ಕನ್ನಡ ಚಿತ್ರರಂಗದಲ್ಲಿ ಇತ್ತೀಚೆನ ದಿನಗಳಲ್ಲಿ ವಂಚನೆ ಆರೋಪಗಳು ಕೇಳಿ ಬರುತ್ತಲೇ ಇವೆ. ಇದೀಗ ಹಾಸ್ಯ ನಟ ಸಾಧು ಕೋಕಿಲ ಹೆಸರಲ್ಲಿ ವಂಚನೆ ನಡೆದಿದೆ. ಚಿತ್ರ ನಿರ್ಮಾಪಕ ಶಿವಶಂಕರ್ ಎಂಬುವವರಿಗೆ ವಂಚನೆ ಮಾಡಿರುವ ಘಟನೆ ಇದಾಗಿದೆ. ಸದ್ಯ ಈ ಸಂಬಂಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ಶಿವಶಂಕರ್ ದೂರು ನೀಡಿದ್ದಾರೆ.
ಹೌದು, ಶಿವಶಂಕರ್ ‘ರಾವಣ’ ಚಿತ್ರದ ನಿರ್ಮಾಪಕ. ಹರಿಹರನ್ ಹಾಗೂ ಅವಿ ಎಂಬುವವರು ರಾವಣ ಚಿತ್ರದಲ್ಲಿ ಸಾಧುಕೋಕಿಲ್ ನಟಿಸುತ್ತಾರೆ. ಸಾಧುಕೋಕಿಲ್ ಅವರನ್ನು ಸಿನಿಮಾದಲ್ಲಿ ಕರೆತರಬೇಕು. ತದನಂತರ ಸಾಧುಕೋಕಿಲಾ ಅವರಿಗೆ ಒಂದು ದಿನಕ್ಕೆ ಒಂದು ಲಕ್ಷ ರೂಪಾಯಿ ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆ ನಿರ್ಮಾಪಕರು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ ಅಡ್ವಾನ್ಸ್ ರೂಪದಲ್ಲಿ 35ಸಾವಿರ ಪಡೆದಿದ್ದಾರೆ.
ಇನ್ನೂ ಇದೇ ತಿಂಗಳ ಹದಿನೆಂಟನೇ ತಾರೀಖಿನಂದು ಹುಬ್ಬಳ್ಳಿಯಲ್ಲಿ 2 ಲಕ್ಷ ಖರ್ಚು ಮಾಡಿ ಶೂಟಿಂಗ್ ಗೆ ನಿರ್ಮಾಪಕರು ತಯಾರಿ ಮಾಡಿಕೊಂಡಿದ್ದರು. ಈ ವೇಳೆ ಸಾಧುಕೋಕಿಲ ಬಂದಿಲ್ಲ. ಯಾಕೆ ಅಂತಾ ತಕ್ಷಣ ಅವರಿಗೆ ಕರೆ ಮಾಡಿದಾಗ ಸಾಧು ನಾನು ವಿದೇಶ ದಲ್ಲಿದ್ದೇನೆ. ನಾನು ಯಾರ ಬಳಿಯೂ ಹಣ ಪಡೆದಿಲ್ಲ. ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ ಎಂದು ಹೇಳಿದ್ದಾರೆ.