ಕಾನ್ ಪುರ್, ಮೇ.8, ನ್ಯೂಸ್ ಎಕ್ಸ್ ಪ್ರೆಸ್: ಆಪ್ತರನ್ನು ಕಳೆದುಕೊಂಡ ನೋವು ಪ್ರತಿಯೊಬ್ಬರನ್ನೂ ಕಾಡುತ್ತದೆ. ಇದೇ ಕಾರಣಕ್ಕೆ ಸಾವಿಗೆ ಜನ ಹೆದರುತ್ತಾರೆ. ಆದ್ರೆ ಸತ್ತ ವ್ಯಕ್ತಿ ಬದುಕಿ ಬಂದ್ರೆ ಆಗುವ ಸಂತೋಷ ಅಷ್ಟಿಷ್ಟಲ್ಲ. ಉತ್ತರ ಪ್ರದೇಶದ ಕಾನ್ಪುರದ ಹಳ್ಳಿಯೊಂದರಲ್ಲಿ ಆಶ್ಚರ್ಯಕಾರಿ ಘಟನೆ ನಡೆದಿದೆ. 115 ವರ್ಷದ ಸಾಧುವೊಬ್ಬರು ಸಾವನ್ನಪ್ಪಿದ್ದರು. ಊರವರೆಲ್ಲ ಸೇರಿ ಅಂತಿಮ ಸಂಸ್ಕಾರಕ್ಕೆ ತಯಾರಿ ನಡೆಸಿದ್ದಾರೆ. ಆದ್ರೆ ಸತ್ತ ನಾಲ್ಕು ಗಂಟೆಯಲ್ಲಿ ಚಮತ್ಕಾರ ನಡೆದಿದೆ. ಸತ್ತ ಸಾಧು ಹೃದಯ ಬಡಿತ ಮತ್ತೆ ಶುರುವಾಗಿದೆ. ಇದನ್ನು ಕಂಡ ಗ್ರಾಮಸ್ಥರು ಖುಷಿಯಿಂದ ಕುಣಿದಾಡಿದ್ದಾರೆ. ಸಾಧು ಹೆಸರು ನಾರಾಯಣ ಬಾಬಾ. 15ರಿಂದ 20 ವರ್ಷಗಳ ಹಿಂದೆ ಗ್ರಾಮದ ದೇವಸ್ಥಾನಕ್ಕೆ ಸಾಧು ಬಂದಿದ್ದರಂತೆ. ಆ ನಂತ್ರ ಇಲ್ಲಿಯೇ ವಾಸ ಶುರು ಮಾಡಿದ್ದರು. ಅನೇಕ ವರ್ಷಗಳಿಂದ ಅನ್ನ ತ್ಯಜಿಸಿರುವ ಸಾಧು, ಹಣ್ಣನ್ನು ಮಾತ್ರ ಸೇವನೆ ಮಾಡ್ತಾರಂತೆ. ಅವ್ರ ವಯಸ್ಸು ಅವ್ರಿಗೆ ಸರಿಯಾಗಿ ತಿಳಿದಿಲ್ಲ. ಕೆಲವರು ಸಾಧು ವಯಸ್ಸು 120 ಎನ್ನುತ್ತಾರೆ. ಸತ್ತ ಕೆಲ ಗಂಟೆಯಲ್ಲಿ ಮತ್ತೆ ಎದ್ದು ಬಂದ ಸಾಧು ನೋಡಲು ಬೇರೆ ಊರುಗಳಿಂದಲೂ ಜನ ಬರ್ತಿದ್ದಾರೆ.