ನನ್ನ ನಡಿಗೆ ಕರ್ನಾಟಕದ ಬಿಜೆಪಿ ‍ಶುದ್ಧೀಕರಣದ ಕಡೆಗೆ : ಡಿ.ವಿ ಸದಾನಂದಗೌಡ

ನನ್ನ ನಡಿಗೆ ಕರ್ನಾಟಕದ ಬಿಜೆಪಿ ‍ಶುದ್ಧೀಕರಣದ ಕಡೆಗೆ : ಡಿ.ವಿ ಸದಾನಂದಗೌಡ

ಬೆಂಗಳೂರು: ಲೋಕಸಭೆ ಚುನಾವಣೆಗೆ ಬೆಂಗಳೂರು ಉತ್ತರ ಕ್ಷೇತ್ರದ ಲೋಕಸಭಾ ಟಿಕೆಟ್ ಕೈ ತಪ್ಪಿದ್ದರಿಂದ ಬೇಸರಗೊಂಡಿದ್ದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಇಂದು ಮಹತ್ವದ ಸುದ್ದಿಗೋಷ್ಟಿಯಲ್ಲಿ ತಮ್ಮ ಮುಂದಿನ ನಿರ್ಧಾರ ಪ್ರಕಟಿಸಿದರು.

ಈ ಕುರಿತು ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿ.ವಿ ಸದಾನಂದಗೌಡರು, ನಗರ ಟಿಕೆಟ್ ಸಿಗದಿದ್ದಕ್ಕೆ ತುಂಬಾ ನೋವಾಗಿದೆ. ನನ್ನ ನಡಿಗೆ ಕರ್ನಾಟಕದ ಬಿಜೆಪಿ ‍ಶುದ್ಧೀಕರಣದ ಕಡೆಗೆ. ಪಕ್ಷ ಶುದ್ಧೀಕರಣ ನನ್ನ ಉದ್ದೇಶ. ನನಗೆ ಅನ್ಯಾಯ ಮಾಡಿದವರು ಮುಂದಿನ ದಿನಗಳಲ್ಲಿ ಪಶ್ಚಾತಾಪ ಪಡುತ್ತಾರೆ ಎಂದಿದ್ದಾರೆ.

ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರಲ್ಲ. ಆದರೆ ನನಗೆ ಟಿಕೆಟ್ ತಪ್ಪಿಸಿದವರು ಪಶ್ಚಾತ್ತಾಪಪಡುತ್ತಾರೆ. ಬಿಜೆಪಿಯಲ್ಲಿ ಶುದ್ಧೀಕರಣವಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಶೇ.100ರಷ್ಟು ನನ್ನ ಹೆಸರು ಮಾತ್ರ ಬಂದಿತ್ತು. ಆದರೆ ದೆಹಲಿಯಲ್ಲಿ, ಇಲ್ಲಿ ಒಂದಷ್ಟು ವಿದ್ಯಮಾನ ನಡೆದಿರುವುದು ನನ್ನ ಗಮನಕ್ಕೆ ಬಂದಿದೆ. ನಿಮಗೆ ಟಿಕೆಟ್ ಅಂತ ಹೇಳಿ ಕೊನೆಯ ಕ್ಷಣದಲ್ಲಿ ನನ್ನ ರಕ್ಷಣೆಗೆ ಬರಲಿಲ್ಲ. ರಾಜಕೀಯದಲ್ಲಿ ಏರುಪೇರು, ಮುಜುಗರ ಸಹಜ. ಆದರೆ ಗೊತ್ತಿದ್ದೂ ಹೀಗೆ ಮಾಡಿರೋದು ಬೇಜಾರಾಯಿತು ಎಂದು ಮೊನ್ನೆಯಷ್ಟೇ ಗೌಡರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos