ಬೆಂಗಳೂರು ಮಾ.19, ನ್ಯೂಸ್ ಎಕ್ಸ್ ಪ್ರೆಸ್: 2 ವಿಶೇಷಚೇತನ ಮಕ್ಕಳಿಗೆ ವಿಷ ಕೊಟ್ಟು ಬಳಿಕ ತಾಯಿಯೂ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ.
ರಾಧಮ್ಮ (50) ಮಕ್ಕಳಾದ ಹರೀಶ್ (28) ಹಾಗೂ ಸಂತೋಷ್ (25) ಗೆ ವಿಷ ಉಣಿಸಿ ತಾವೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂಲತಃ ತಮಿಳುನಾಡಿನ ತಳಿ ಗ್ರಾಮದವರಾದ ರಾಧಮ್ಮ, ಕೆಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದರು.
2 ಮಕ್ಕಳು ವಿಕಲಚೇತನರಾಗಿದ್ದರಿಂದ ಇತ್ತೀಚೆಗೆ ಮನೆಯಲ್ಲೇದ್ದ ರಾಧಮ್ಮ, ಜಿಗುಪ್ಸೆಗೊಂಡು, ನಿನ್ನೆ ರಾತ್ರಿ 2 ಮಕ್ಕಳಿಗೂ ವಿಷ ಉಣಿಸಿ ನಂತರ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.