ತುಮಕೂರು: ಶಿವಕುಮಾರ ಶ್ರೀಗಳ ನಿಧನಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಮ್ಮ ಟ್ವಿಟರ್ನಲ್ಲಿ ಸಂತಾಪ ಸೂಚಿಸಿದ್ದಾರೆ.
ನಡೆದಾಡುವ ದೇವರು, ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ವಿಷಯ ತಿಳಿದು ನನಗೆ ಬಹಳ ನೋವಾಗಿದೆ. ತ್ರಿವಿಧ ದಾಸೋಹಿಯ ಜೀವನ, ಅವರ ಅಪಾರ ಜ್ಞಾನ ಲಕ್ಷಾಂತರ ಮಂದಿಯ ಬದುಕನ್ನೇ ಬದಲಿಸಿದೆ. ಮನುಕುಲಕ್ಕೆ ಅವರ ಜೀವನ ನೀಡಿದ ಸಂದೇಶ ಅನನ್ಯ. ಅವರು ತೋರಿದ ದಾರಿಯಲ್ಲಿ ಸಾಗಲು ನಮಗೆ ಅವರು ಶಕ್ತಿಯನ್ನು ಕರುಣಿಸಲಿ. ಅವರ ಅಸಂಖ್ಯಾತ ಭಕ್ತರಿಗೆ ಶ್ರೀಗಳ ಅಗಲಿಕೆಯ ನೋವು ಭರಿಸುವ ಶಕ್ತಿ ದೊರೆಯಲಿ. ಓಂ ಶಾಂತಿ ಓಂ ಶಾಂತಿ ಎಂದು ಅಮಿತ್ ಶಾ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದು ಕೊಂಡಿದ್ದಾರೆ.