ಬೆಂಗಳೂರು, ನ. 23: ಬೆದರಿಕೆ ಸುಲಿಗೆ ಅಪರಾಧ ಕೃತ್ಯಗಳಲ್ಲ ಬಾಗಿಯಾಗಿದ್ದ ಇಬ್ಬರು ರೌಡಿಗಳನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿದ್ದಾರೆ. ಕುಖ್ಯಾತ ರೌಡಿಗಳಾದ ಶ್ರೀಧರ್ ಸೋಡ,ಸಂತೋಷ ಮೂಳೆಮೇಲೆ ಗೂಂಡಾ ಕಾಯ್ದೆ ಜಾರಿಗೊಳಿಸಿ ಬಂಧಿಸಲಾಗಿದೆ.ಶ್ರೀಧರ್ ಸೋಡ ವಯ್ಯಾಲಿಕಾವಲ್ ಪೊಲೀಸ್ ಠಾಣೆ ರೌಡಿ ಶೀಟರ್ ಆಗಿದ್ದ ಈತನ ಮೇಲೆ ಕೊಲೆ,ದರೋಡೆ ಕೊಲೆಯತ್ನ ಸುಲಿಗೆ ಪ್ರಕರಣಗಳು ದಾಖಲಾಗಿದ್ದರಿಂದ ಬಂಧಿಸಲಾಗಿದೆ.
ಸಂಪಂಗಿರಾಮನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಸಂತೋಷ್ ವಿರುದ್ದ ಕೊಲೆ ಯತ್ನ ಸೇರಿ 14 ಪ್ರಕರಣಗಳು ದಾಖಲಾಗಿದ್ದ ಹಿನ್ನೆಲೆಯಲ್ಲಿ ನಿರಂತರ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ ಕಾರಣ ಗೂಂಡಾ ಕಾಯ್ದೆ ಅಡಿ ಬಂಧಿಸಲಾಗಿದೆ.