ಮಂಡ್ಯ, ಏ. 12, ನ್ಯೂಸ್ ಎಕ್ಸ್ ಪ್ರೆಸ್: ಸಿಎಂ ಬೆಂಗಾವಲು ವಾಹನದಲ್ಲಿ ರೌಡಿಶೀಟರ್ ಇದ್ದ ಎನ್ನಲಾದ ಈ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಗಡಿಪಾರು ಆಗಬೇಕಿದ್ದ ರೌಡಿಶೀಟರ್ಗೆ ಪೊಲೀಸ್ ರಾಜಾತಿಥ್ಯ ಸಿಕ್ಕಿದೆ ಎಂಬ ಆರೋಪ ಕೇಳಿಬಂದಿದೆ. ಜಿಲ್ಲಾ ಪೊಲೀಸ್ ಇಲಾಖೆ ಶಾಂತಿಯುತ ಚುನಾವಣೆ ನಡೆಸಲು ರೌಡಿ ಶೀಟರ್ಗಳನ್ನ ಗಡಿಪಾರು ಮಾಡುತ್ತಿದೆ. ಜೊತೆಗೆ ಇನ್ನಿತರ ರೌಡಿಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಆದರೆ ಮಳವಳ್ಳಿಯಲ್ಲಿ ರೌಡಿ ಶೀಟರ್ಗೆ ಪೊಲೀಸರ ರಾಜಾತಿಥ್ಯ ಸಿಕ್ಕಿದೆ ಎಂಬ ಆರೋಪ ಕೇಳಿಬಂದಿದೆ. ನಿನ್ನೆ ನಡೆದ ಪ್ರಚಾರ ಕಾರ್ಯದ ವೇಳೆ ಸಿಎಂ ಬೆಂಗಾವಲು ವಾಹನದಲ್ಲಿ ಕಿರುಗಾವಲು ಠಾಣೆ ವ್ಯಾಪ್ತಿಯಲ್ಲಿನ ರೌಡಿ ಶೀಟರ್ ಪ್ರಕಾಶ್ ಕುಳಿತು ಹೋಗುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಿರುಗಾವಲು ಪೊಲೀಸ್ ಠಾಣೆಯ ರೌಡಿಶೀಟರ್ ಆಗಿರೋ ಪ್ರಕಾಶ್ ಹೇಗೆ ಪೊಲೀಸರ ವಾಹನದಲ್ಲಿ ಕುಳಿತಿದ್ದ ಎಂಬ ಪ್ರಶ್ನೆ ಎದ್ದಿದೆ.