ರಸ್ತೆಗಳು ಗುಂಡಿ ಬಿದ್ದು ಹಾಳು : ಸಿಟಿ ರವಿ ವಿಷಾದ

ರಸ್ತೆಗಳು ಗುಂಡಿ ಬಿದ್ದು ಹಾಳು : ಸಿಟಿ ರವಿ ವಿಷಾದ

ಕೊಪ್ಪಳ, ನ. 5 : 6 ವರ್ಷದಲ್ಲಿ ಕಾಂಗ್ರೆಸ್ ಮತ್ತು ಮೈತ್ರಿ ಸರ್ಕಾರ ನನ್ನ ಕ್ಷೇತ್ರಕ್ಕೆ ಅನುದಾನ ನೀಡಿಲ್ಲ ಇದಕ್ಕೆ ರಸ್ತೆಗಳು ಗುಂಡಿ ಬಿದ್ದು ಹಾಳಾಗಿದ್ದವು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಅವರು ಮಂಗಳವಾರ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ರಸ್ತೆಗಳು ಗುಂಡಿ ಬಿದ್ದ ಕಾರಣ ಸಾವು ಸಂಭವಿಸಿದ್ದು ದುರದೃಷ್ಟವಶಾತ್ ಆಗಿ ಹೋಗಿದೆ ಇದಕ್ಕೆ ನಾನು ವಿಷಾಧಿಸುತ್ತೇನೆ ಎಂದು ಅವರು ಪ್ರತಿಕ್ರಿಯೆ ನೀಡಿದರು.
ಇನ್ನು ಆರ್ಸಿಇಪಿ (ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ) ಒಪ್ಪಂದಕ್ಕೆ ಸಹಿ ಹಾಕುವುದನ್ನು ಪ್ರಧಾನಿ ಕೈಬಿಟ್ಟಿದ್ದಾರೆ. ಇದರಿಂದ ನರೇಂದ್ರ ಮೋದಿ ಅವರು ರೈತ ನಾಯಕ ಆಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos