ರಸ್ತೆಯಲ್ಲಿ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅಂದರ್

ರಸ್ತೆಯಲ್ಲಿ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅಂದರ್

ಬೆಂಗಳೂರು, ಜೂ. 26: ದೇವನಹಳ್ಳಿ, ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 7 ಜನರನ್ನು ವಶಕ್ಕೆ ಪಡೆದುಕೊಂಡು 8,76,300 ಅಂದಾಜು ಬೆಲೆಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್‌ಪಿ ಆರ್.ಮೋಹನ್‌ಕುಮಾರ್ ಹೇಳಿದರು.

ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಆವರಣದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಂತಪುರ ಜಿಲ್ಲೆಯ ಹಿಂದೂಪುರ ತಾಲ್ಲೂಕು ಲೇಪಾಕ್ಷಿ ಮಂಡಲ ಗೊಂಗಟಪಲ್ಲಿ ಗ್ರಾಮದ ನಿವಾಸಿ ಈಗಿನ ಎಲ್ಲೋಡು ಗ್ರಾಮದ ಸಂದೀಪ್‌ರೆಡ್ಡಿ ಅಲಿಯಾಸ್ ಕೋತಿರೆಡ್ಡಿ ಆಲಿಯಾಸ್ ಪೋತರಾಜ (23) ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕಿನ ನಿಚ್ಚನಬಂಡೆಹಳ್ಳಿಯ ಶ್ರೀನಿವಾಸ.ಎನ್.ವಿ ಅಲಿಯಾಸ್ ಬೀಮ (21), ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಟೌನ್ 3 ನೆ ವಾರ್ಡಿನ ಇಂದಿರಾನಗರದ ನಿವಾಸಿ ನವೀನ ಅಲಿಯಾಸ್ ಹೋಟಲ್ ನವೀನ (19), ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕಿನ ಉಲ್ಲೋಡು ಹೋಬಳಿ ನಿಚ್ಚನಬಂಡೆಹಳ್ಳಿಯ ರಜನಿಕಾಂತ್ ಅಲಿಯಾಸ್ ಪಿಲ್ಲ (22), ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಟೌನ್ ಕುಂಬಾರಪೇಟೆಯ ಶ್ರೀನಿವಾಸ್ ಅಲಿಯಾಸ್ ಸೀನ(23) ಗುಡಿಬಂಡೆ ಟೌನ್ 2 ನೇ ವಾರ್ಡಿನ ಪ್ರದೀಪ್ ಅಲಿಯಾಸ್ ಮಾಚಾರ್ಲಹಳ್ಳಿ (23), ಅಪ್ರಾಪ್ತ ಬಾಲಕನೊಬ್ಬ ಇವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗಿದೆ.

ಬಂಧಿತರಿಂದ ಕೆ.ಎ.04 ಎಎ 5411 ಕಾರು, ಚಿನ್ನದ ಉಂಗುರ, 2 ದ್ವಿಚಕ್ರ ವಾಹನಗಳು, ಮೂರು ಕಬ್ಬಿಣದ ಲಾಂಗುಗಳು, ಒಂದು ಲ್ಯಾಪ್‌ಟಾಪ್, ನಾಲ್ಕು ಮೊಬೈಲ್ ಪೋನುಗಳು, ಒಂದು ಚಿನ್ನದ ತಾಳಿ, ಒಂದು ಬೆಳ್ಳಿಯ ಚೈನು, 12.300 ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಹಿಂದಿನ ಪೊಲೀಸ್ ಅಧಿಕ್ಷಕ ಶ್ರೀರಾಮ್ ನಿವಾಸ್ ಸೆಪಟ್, ಪೊಲೀಸ್ ಅಧಿಕ್ಷಕ ಟಿ.ಪಿ.ಶಿವಕುಮಾರ್, ಅಪರ ಪೊಲೀಸ್ ಅಧಿಕ್ಷಕ ವಿ.ಜೆ.ಸಜೀತ್, ಅವರ ಮಾರ್ಗದರ್ಶನದಲ್ಲಿ ಬಂಧಿತರನ್ನು ವಿಚಾರಣೆ ನಡೆಸಲಾಗಿದೆ ಎಂದರು.

ಸಿ.ಪಿ.ಐ. ಡಿ.ಆರ್.ಪ್ರಕಾಶ್, ಪಿ.ಎಸ್.ಐ.ನಂದೀಶ್, ಸಿಬ್ಬಂದಿ ನಾರಾಯಣಸ್ವಾಮಿ, ಚಂದ್ರು, ಹೆಚ್.ಸಿ.ಉಮೇಶ್, ಬಸವರಾಜ್, ಮಧುಕುಮಾರ್, ಅರುಣ್‌ಕುಮಾರ್, ವೈ.ಎನ್.ರಮೇಶ್, ಪ್ರಸನ್ನಕುಮಾರ್, ರವಿ, ನಿಂಗಜ್ಜ, ರಮೇಶ್‌ನಾಯ್ಕ, ಸಾಬಣ್ಣ, ರಮೇಶ್.ಬಿ.ಎಸ್, ರುದ್ರೇಶ್ ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos