ರೇವಣ್ಣರ ನಿಂಬೆಹಣ್ಣಿನ ವಾಮಾಚಾರ ಫಲಿಸಲ್ಲ!

ರೇವಣ್ಣರ ನಿಂಬೆಹಣ್ಣಿನ ವಾಮಾಚಾರ ಫಲಿಸಲ್ಲ!

ಬೆಂಗಳೂರು, ಜು. 13 : 2019ರ ಲೋಕಸಭಾ ಚುನಾವಣೆಯ ಫಲಿತಾಂಶ ಬಂದಮೇಲೆ ರಾಜ್ಯದ ರಾಜಕೀಯದಲ್ಲಿ ಹಲಾವಾರು ಬದಲಾವಣೆಗಳು ದಿನೆ ದಿನೆ ನಡಿತಾನೆ ಇದೇ.  ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಅವರು ಗೌರವದಿಂದ ರಾಜೀನಾಮೆ ಕೊಟ್ಟು ಹೋಗಲಿ ಎಂದು ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

ನಮಗೆ ರಿವರ್ಸ್ ಆಪರೇಷನ್ ಭಯವಿಲ್ಲ. ಶಾಸಕರೆಲ್ಲ ಒಟ್ಟಾಗಿ ಇರುವ ಉದ್ದೇಶದಿಂದ ರೆಸಾರ್ಟ್ ನಲ್ಲಿ ಇದ್ದೇವೆ ಎಂದು ಅವರು ಹೇಳಿದ್ದಾರೆ.

ನಿಂಬೆಹಣ್ಣು ಹೆಚ್.ಡಿ. ರೇವಣ್ಣ ವಾಮಾಚಾರ ಮಾಡುತ್ತಿದ್ದಾರೆ. ಅವರ ವಾಮಾಚಾರ ಸಫಲವಾಗುವುದಿಲ್ಲ. ಸರ್ಕಾರ ಉಳಿಸಿಕೊಳ್ಳಲು ಸಿಎಂ ಏನೆಲ್ಲ ಪ್ರಯತ್ನ ನಡೆಸುತ್ತಿದ್ದಾರೆ. ಅವರ ಪ್ರಯತ್ನ ಫಲಿಸಲ್ಲ. ಸಿಎಂ ಕುಮಾರಸ್ವಾಮಿ ಅಧಿಕಾರ ಉಳಿಸಿಕೊಳ್ಳಲು ವಾಮಮಾರ್ಗ ಅನುಸರಿಸದೆ, ಗೌರವದಿಂದ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ರಿವರ್ಸ್ ಆಪರೇಷನ್ ನಡೆಯುವುದಿಲ್ಲ. ರೇವಣ್ಣ ನಿಂಬೆಹಣ್ಣು ವಾಮಾಚಾರ ಮಾಡಿದ್ರೂ ಏನೂ ಆಗಲ್ಲ. ಸರ್ಕಾರ ಬೀಳಲಿದೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos