ಪತ್ರಕರ್ತರಿಗೆ ನಿವೇಶನ – ಗೋವಿಂದಗೌಡ

ಪತ್ರಕರ್ತರಿಗೆ ನಿವೇಶನ – ಗೋವಿಂದಗೌಡ

ಕೋಲಾರ: ಪತ್ರಕರ್ತರ ಸಹಕಾರ ಸಂಘದಲ್ಲಿ ಈಗಾಗಲೇ ನಿವೇಶನಕ್ಕಾಗಿ ನೊಂದಾಯಿಸಿ ಕೊಂಡಿರುವ ಪತ್ರಕರ್ತರಿಗೆ ಮಾರ್ಚ್ ಅಂತ್ಯದೊಳಗೆ ರಿಯಾಯಿತಿ ದರದಲ್ಲಿ ನಿವೇಶನ ಒದಗಿಸುವುದಾಗಿ ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಘೋಷಿಸಿದರು.
ಮಂಗಳವಾರ ಕೋಲಾರ ,ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿದೋದ್ದೇಶ ಸಹಕಾರ ಸಂಘದ ೨೦೧೯-೨೦ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿ ಈಗಾಗಲೇ ೪ ಎಕರೆ ಜಮೀನನ್ನು ಗುರುತಿಸಿ ಅಭಿವೃದ್ದಿಪಡಿಸಲಾಗುತ್ತಿದೆ ಎಂದರು.
ಈಗಾಗಲೇ ಪತ್ರಕರ್ತರ ಸಹಕಾರ ಸಂಘದಲ್ಲಿ ೬೦ ಪತ್ರಕರ್ತರು ನಿವೇಶನಕ್ಕಾಗಿ ನೊಂದಾಯಿಸಿದ್ದು, ಡಿಸೆಂಬರ್ ಅಂತ್ಯದೊಳಗೆ ಶೇ.೫೦ ರಷ್ಟು ಹಣವನ್ನು ಠೇವಣಿ ಇಡುವ ಪತ್ರಕರ್ತರಿಗೆ ನಿವೇಶನವನ್ನು ನೀಡುವುದಾಗಿ ತಿಳಿಸಿದರು.
ಚುನಾವಣೆ ರಾಜಕೀಯ ಬೇಡ, ಸಂಘ ಉಳಿಸಿ ಬೆಳೆಸೋಣ, ಕೋವಿಡ್ ಸಂಕಷ್ಟದ ಕಾಲದಲ್ಲೂ ನಷ್ಟವಾಗದಂತೆ ಸುಭದ್ರವಾದ ಹೆಜ್ಜೆ ಇಡುತ್ತಿದ್ದೇವೆ, ರಾಜ್ಯ ಪತ್ರಕರ್ತರ ಸಹಕಾರ ಸಂಘದ ಮಾದರಿ ಸದಸ್ಯರಿಗೆ ೩ ಲಕ್ಷ ಸಾಲ ನೀಡುವ ಆಶಯವಿದೆ ಎಂದರು.
ಸಹಕಾರ ಸಂಘದ ಅಧ್ಯಕ್ಷ ಕೋ.ನಾ.ಮಂಜುನಾಥ್, ಸಂಘ ಕಳೆದ ಸಾಲಿನಲ್ಲಿ ನಡೆದ ವಿವಿಧ ಚಟುವಟಿಕೆಗಳ ಕುರಿತು ವರದಿ ಮಂಡಿಸಿ, ಮುಂದಿನ ಸಾಲಿನಲ್ಲಿ ಕೈಗೊಳ್ಳಬೇಕಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ಫ್ರೆಶ್ ನ್ಯೂಸ್

Latest Posts

Featured Videos