‘ರೆಸಾರ್ಟ್ ಮೋಜು ಮಸ್ತಿಯಲ್ಲಿ ಸಿಎಂ’ – ಶ್ರಿರಾಮುಲು

‘ರೆಸಾರ್ಟ್ ಮೋಜು ಮಸ್ತಿಯಲ್ಲಿ ಸಿಎಂ’ – ಶ್ರಿರಾಮುಲು

ಹುಬ್ಬಳ್ಳಿ , ಮೇ.11, ನ್ಯೂಸ್ ಎಕ್ಸ್ ಪ್ರೆಸ್ : ಪ್ರಚಾರಕ್ಕೆ ಹೋದಲ್ಲೆಲ್ಲ ಸಿಎಂ ಬಗ್ಗೆ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಉತ್ತರ ಕರ್ನಾಟಕದ ಭಾಗದಲ್ಲಿ ತೀವ್ರ ಬರಗಾಲವಿದ್ದರೂ, ಕುಮಾರಸ್ವಾಮಿ ರೆಸಾರ್ಟ್ ನಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಶ್ರೀರಾಮುಲು ಆರೋಪಿಸಿದ್ದಾರೆ.

ಕುಂದಗೋಳ ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡರ ಪರ ಪ್ರಚಾರದಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ಬಿಜೆಪಿ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಯಡಿಯೂರಪ್ಪ ಸಿಎಂ ಆಗಲೆಂದೇ ಈ ಎರಡು ಚುನಾವಣೆ ನಡೆಯುತ್ತಿವೆ. 104 ಸ್ಥಾನಗಳನ್ನು ಗೆದ್ದು ವಿರೋಧ ಪಕ್ಷದಲ್ಲಿದ್ದೀವಿ. ಕೇವಲ 20,30 ಸ್ಥಾನ ಗೆದ್ದವರು ಸಿಎಂ ಆಗಿದ್ದಾರೆ. ರಾಜ್ಯಕ್ಕೆ ಸಮರ್ಥ ನಾಯಕ ಬೇಕಾಗಿದೆ. ಅದು ಯಡಿಯೂರಪ್ಪ ಒಬ್ಬರೇ ಎಂದು ಶ್ರೀರಾಮುಲು ಹೇಳಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos