ಸೀಮೆ ಎಣ್ಣೆ ವಿತರಿಸಲು ಆಗ್ರಹ

ಸೀಮೆ ಎಣ್ಣೆ ವಿತರಿಸಲು ಆಗ್ರಹ

ಪಾವಗಡ: ತಾಲ್ಲೂಕಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಚಿಲ್ಲರೆ ಸೀಮೆ ಎಣ್ಣೆ ಮಾರಾಟಗಾರರು ಅನುಮತಿ ಪಡೆದು ಪಡಿತರ ಚೀಟಿಯ ಫಲಾನುಭವಿಗಳಿಗೆ ಸೀಮೆ ಎಣ್ಣೆ ವಿತರಿಸುತ್ತಿದ್ದು ಒಂದು ತಿಂಗಳು ಸೀಮೆ ಎಣ್ಣೆ ಕೊಟ್ಟು ಮತ್ತೊಂದು ತಿಂಗಳು ಬಂದಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆಂದು ಪಡಿತರದಾರರು ಆರೋಪಿಸಿದ್ದಾರೆ.
ಕಡುಬಡವರಿಗೆ ತೋದರೆ ಅಗುತ್ತಿದ್ದು ಬೇರೆ ತಾಲ್ಲೂಕಿನಲ್ಲಿ ಸೀಮೆ ಎಣ್ಣೆ ವಿತರಿಸುತ್ತಿದ್ದು ನಮ್ಮ ತಾಲ್ಲೂಕಿಗೆ ಸೀಮೆ ಎಣ್ಣೆ ರದ್ದು ಮಾಡಿರುವುದರಿಂದ ಚಿಲ್ಲರೆ ಸೀಮೆ ಎಣ್ಣೆ ದಾರರಿಗೆ ತೋದರೆಯಾಗುತ್ತಿದೆ. ಕೂಡಲೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು ಪಡಿತರ ಚೀಟಿದಾರರಿಗೆ ಅನುಕೂಲ ಮಾಡಿಕೊಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷರಾದ ಪೂಜಾರಪ್ಪ ನೇತೃತ್ವದಲ್ಲಿ ತಹಸಿಲ್ದಾರ್ ನಾಗರಾಜ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯದರ್ಶಿ ಶಿವರಾಜ್, ಗೋಪಾಲ, ಅಶ್ವತ್ಥಪ್ಪ, ಗುಡ್ಡಿಪಾಲಪ್ಪ, ಸದಾಶಿವಪ್ಪ, ಯರಗುಂಟಪ್ಪ , ಮಲ್ಲಪ್ಪ ಉಪಸ್ಥಿತರಿದ್ದರು

ಫ್ರೆಶ್ ನ್ಯೂಸ್

Latest Posts

Featured Videos