ಮಂಡ್ಯ, ಅ. 16: ರೈತರ ಪಾಲಿನ ಜೀವನದಿ, ಕೆಆರ್ಎಸ್ ಜಲಾಶಯ ಇಂದು ಐತಿಹಾಸಿಕ ದಾಖಲೆ ಬರೆದಿದೆ. 2006 ರ ಬಳಿಕ ಧೀರ್ಘಕಾಲ ಭರ್ತಿಯಾಗಿ ಉಳಿದ ಕೀರ್ತಿಗೆ ಕೆಆರ್ಎಸ್ ಜಲಾಶಯ ಪಾತ್ರವಾಗಿದೆ. ಕೆಆರ್ ಎಸ್ ಅಣೆಕಟ್ಟು 120.80 ಅಡಿ ತುಂಬಿ 50 ದಿನಗಳು ಕಳೆದಿದೆ , ಈ ಹಿಂದೆ ಸತತ ನಾಲ್ಕು ವರ್ಷಗಳ ಕಾಲ ರಾಜ್ಯ ತೀವ್ರ ಬರದಿಂದ ತತ್ತರಿಸಿ ಹೋಗಿತ್ತು. ಇದೀಗ ಕಾವೇರಿ ಕೊಳ್ಳದಲ್ಲಿ ಸುರಿಯುತ್ತಿರುವ ಸತತ ಮಳೆ ಜಲಾಶಯ ದೀರ್ಘಕಾಲದವರೆಗೆ ಭರ್ತಿಯಾಗುವಂತೆ ಮಾಡಿದೆ.
ನಿನ್ನೆ ಸಂಜೆಯಿಂದಲೇ 4 ಸಾವಿರ ಕ್ಯೂಸೆಕ್ ಗೂ ಹೆಚ್ಚು ನೀರು ಕಟ್ಟೆಗೆ ಹರಿದು ಬರುತ್ತಿದೆ, ಇಂದು ಬೆಳಗ್ಗೆ ಇದು 10 ಸಾವಿರ ಕ್ಯೂಸೆಕ್ ದಾಟಿತ್ತು .ಇನ್ನೂ ಒಳ ಹರಿವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದ್ದು,ಸದ್ಯಕ್ಕೆ 20 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ,.