ಪೀಣ್ಯ ದಾಸರಹಳ್ಳಿ, ನ. 03: ದಾಸರಹಳ್ಳಿ ಸಮೀಪ ಕೆಂಪೇಗೌಡ ನಗರದಲ್ಲಿ ಕೆಂಪೇಗೌಡ ಯುವಕರ ಸಂಘದ ವತಿಯಿಂದ ದಾಖಲೆ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ಮತ್ತು ಅಣ್ಣಮ್ಮ ದೇವಿಯ ಉತ್ಸವದಲ್ಲಿ ಶಾಸಕ ಆರ್. ಮಂಜುನಾಥ್ ಸರ್ಕಾರಿ ಶಾಲೆಯ ಮಕ್ಕಳಿಗೆ ಪುಸ್ತಕ ಮತ್ತು ಬ್ಯಾಗ್ ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ಸುಭಾಷ್, ಬಿ.ಎನ್. ಜಗದೀಶ್, ನಾಗೇಶ್, ಸಂತೋಷ್, ಕೃಷ್ಣಮೂರ್ತಿ ಇನ್ನು ಮುಂತಾದವರು ಇದ್ದರು.