ರಾಜಕೀಯ ಬಿಟ್ಟರು ಮಂಡ್ಯ ಬಿಡುವುದಿಲ್ಲ ಎಂದ ರೇಬಲ್‌ ಲೇಡಿ!

ರಾಜಕೀಯ ಬಿಟ್ಟರು ಮಂಡ್ಯ ಬಿಡುವುದಿಲ್ಲ ಎಂದ ರೇಬಲ್‌ ಲೇಡಿ!

ಬೆಂಗಳೂರು: ರಾಜಕೀಯ ಬಿಟ್ಟರು ಮಂಡ್ಯ ಬಿಡುವುದಿಲ್ಲ ಎನ್ನುವ ತಮ್ಮ ಹಿಂದಿನ ಹೇಳಿಕೆಗೆ ಈಗಲೂ ಬದ್ಧ ಇರುವುದಾಗಿ ಸಂಸದೆ ಸುಮಲತಾ ಅಂಬರೀಶ್ ಪುನರ್ರುಚ್ಚರಿಸಿದ್ದಾರೆ.

ಮದ್ದೂರಿನಲ್ಲಿ ಮಾತನಾಡಿದ ಅವರು ತಮಗೆ ಬಿಜೆಪಿ ಟಿಕೆಟ್ ಸಿಗುವುದೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಕಾದು ನೋಡಿ ಎಂದು ತಿಳಿಸಿದ್ದಾರೆ. ಬಿಜೆಪಿ ಜೆಡಿಎಸ್ ಮೈತ್ರಿ ಅನ್ವಯ ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾಗ್ಗಿದೆ ಎನ್ನುವ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಅಂತೆ ಕಂತೆಗಳಿಗೆ ಕಿವಿ ಕೊಡಬೇಡಿ ಎಂದಿದ್ದಾರೆ.

ಮಂಡ್ಯ ಕ್ಷೇತ್ರ ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಸ್ಪರ್ಧಿಸುವ ಮಾತುಗಳು ಕೇವಲ ಊಹಪೋವಗಳಷ್ಟೇ ಸಂಸದೆಯಾಗಿ ನನ್ನನ್ನು ಆಯ್ಕೆ ಮಾಡಿದ ಮಂಡ್ಯ ಜಿಲ್ಲೆಯ ಜನರನ್ನು ಬಿಟ್ಟು ಬೇರೆ ಕಡೆ ತೆರಳುವ ಮಾತೇ ಇಲ್ಲ ರಾಜಕೀಯ ಬಿಟ್ಟರು ಮಂಡ್ಯ ಬಿಡುವುದಿಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos