ರಾಯುಡು, ಮುರಳಿ, ಜಾಧವ್ ಔಟ್..!

ರಾಯುಡು, ಮುರಳಿ, ಜಾಧವ್ ಔಟ್..!

ಬೆಂಗಳೂರು, ನ. 13 : ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ 2 ವರ್ಷಗಳಿಂದ ನಿಷೇಧಕ್ಕೊಳಗಾಗಿದ್ದ ಕೂಲ್ ಕ್ಯಾಪ್ಟನ್ ಮಹೇಂದ್ರಸಿಂಗ್ ಧೋನಿ ಕಳೆದ ಬಾರಿ ಮತ್ತೆ ಚಾಂಪಿಯನ್ಸ್ ಆಗುವ ಮೂಲಕ ಪ್ರೇಕ್ಷಕರ ದಿಲ್ ಗೆದ್ದಿದ್ದು ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಕಾರ್ಯತಂತ್ರ ಹೆಣೆಯುತ್ತಿದ್ದಾರೆ.
ಮುಂದಿನ ಬಾರಿಯ ಐಪಿಎಲ್ನಲ್ಲಿ ಚಾಂಪಿಯನ್ಸ್ ಆಗಲು ಕಳೆದ ಬಾರಿ ಕಳಪೆ ಪ್ರದರ್ಶನ ನೀಡಿದ ಕೆಲವು ಆಟಗಾರರಿಗೆ ಕೊಕ್ ನೀಡಲು ಕೂಡ ತಂಡದ ಆಡಳಿತ ಮಂಡಳಿ ನಿರ್ಧರಿಸಿದೆ.

ವಿಶ್ವಕಪ್ನಲ್ಲಿ ಸ್ಥಾನ ದೊರೆಯಲಿಲ್ಲ ಎಂಬ ಕೋಪದಿಂದ ನಿವೃತ್ತಿ ಘೋಷಿಸಿ ನಂತರ ಮತ್ತೆ ಕ್ರಿಕೆಟ್ ಅಂಗಳಕ್ಕೆ ಮರಳಿರುವ ಅಂಬಾಟಿ ರಾಯುಡು ಕಳೆದ ಐಪಿಎಲ್ನಲ್ಲಿ ತಮ್ಮ ಬ್ಯಾಟ್ನಿಂದ ರನ್ಗಳ ಸುರಿಮಳೆಯನ್ನೇ ಸುರಿಸಿದ್ದರೂ ಕೂಡ ಮುಂಬರುವ ಐಪಿಎಲ್ನಿಂದ ಅವರನ್ನು ಹೊರಗಿಡಲು ಚಿಂತನೆ ನಡೆಸಿರುವುದು ಅಚ್ಚರಿ ಮೂಡಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos