ಬೆಂಗಳೂರು, ಮೇ. 28, ನ್ಯೂಸ್ ಎಕ್ಸ್ ಪ್ರೆಸ್: ಸ್ಟಾರ್ ನಟರ ಮಕ್ಕಳ ಮದುವೆ ಅಂದ್ರೆ ಸಂಭ್ರಮ. ಅದ್ರಲ್ಲೂ ಕ್ರೇಜಿಸ್ಟಾರ್ ರವಿಚಂದ್ರನ್ ಮಗಳ ಮದುವೆ ‘ಅದ್ಧೂರಿ’ ಇದ್ದೇ ಇರುತ್ತೆ. ಯಾಕಂದ್ರೆ, ಮಗಳ ಮದುವೆಯೂ ಕೂಡ ಅಷ್ಟೇ. ರವಿಚಂದ್ರನ್ ಮುದ್ದಿನ ಮಗಳು ಗೀತಾಂಜಲಿ ನಾಳೆ ಉದ್ಯಮಿ ಆನಂದ್ ಜೊತೆಯಾಗಿ ಸಪ್ತಪದಿ ತುಳಿಯಲಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾದ ಬೃಹತ್ ಕಲ್ಯಾಣ ಮಂಟಪ ಗಾಜಿನ ವಿನ್ಯಾಸ, ಬಣ್ಣ ಬಣ್ಣದ ಹೂಗಳು ಜೊತೆಗೆ ರಂಗು ರಂಗಿನ ಚಿತ್ತಾರದಿಂದ ಸಿಂಗಾರಗೊಳಿಸಲಾಗಿದೆ. ಇಂದು ಸಂಜೆ ಮದುವೆ ಆರತಕ್ಷತೆ ಕಾರ್ಯಕ್ರಮವಿದ್ದು, ಸೌತ್ ಸಿನಿ ಇಂಡಸ್ಟ್ರಿಯ ಖ್ಯಾತ ತಾರೆಯರಾದ ರಜಿನಿಕಾಂತ್, ಕಮಲ್ ಹಾಸನ್, ಚಿರಂಜೀವಿ, ಶಿಲ್ಪಾ ಶೆಟ್ಟಿ, ಅಮಿತಾಬ್ ಬಚ್ಚನ್ ಸೇರಿದಂತೆ ಹಲವು ಸ್ಟಾರ್ಗಳು ಭಾಗವಹಿಸುವ ನಿರೀಕ್ಷೆ ಇದೆ. ವೇದಿಕೆಯಲ್ಲಿ ಸುಮಾರು 40 ಕ್ಯಾಮೆರಾ ಸೆಟಪ್, ಹತ್ತು ಸಾವಿರ ಜನ ಕುಳಿತು ಆರಾಮಾಗಿ ಮದುವೆ ನೋಡುವ ವ್ಯವಸ್ಥೆ ಕೂಡ ಮಾಡಲಾಗಿದೆಯಂತೆ. ದೇವಲೋಕದ ವೈಭವದಲ್ಲಿ ರವಿಮಾಮನ ಮಗಳ ಮದುವೆ ನಡೀತಾ ಇದ್ದು, ಸ್ಯಾಂಡಲ್ವುಡ್ನಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.