ಅತ್ಯಾಚಾರ : ಯುವಕನ ಮೇಲೆ ಆರೋಪ

ಅತ್ಯಾಚಾರ : ಯುವಕನ ಮೇಲೆ ಆರೋಪ

ಚಿತ್ರದುರ್ಗ, ಡಿ. 22 : ಬಯಲು ಬಹಿರ್ದೆಸೆಗೆ ತೆರಳಿದ್ದ ಬಾಲಕಿಯನ್ನು ಆಂಧ್ರ ಪ್ರದೇಶದ ಯುವಕ ಅಪಹರಣ ಮಾಡಿ, ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕರ್ನಾಟಕ ಗಡಿಭಾಗದಲ್ಲಿ ಕೇಳಿಬಂದಿದೆ.
ಡಿಸೆಂಬರ್ 17 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 16 ವರ್ಷದ ಬಾಲಕಿ ಬಯಲು ಬಹಿರ್ದೆಸೆಗೆ ತೆರಳಿದ್ದಾಗ ಆಕೆಯನ್ನು ಆಂಧ್ರದ ರಾಯದುರ್ಗ ತಾಲೂಕಿನ ಸೋಮಲಾಪುರದ ಹರೀಶ್ (21) ಎಂಬಾತ ಅಪಹರಿಸಿದ್ದಾನೆ. ನಂತರ ಬಾಲಕಿಯನ್ನು ರಾಂಪುರ ಗಡಿಭಾಗದಿಂದ ಆಂಧ್ರದ ಹಡಗಲಿ ಬಳಿ ಕರೆದುಕೊಂಡು ಹೋಗಿದ್ದು, ನಿರ್ಜನ ಪ್ರದೇಶದಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆಂದು ಆರೋಪಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos