ನವದೆಹಲಿ: ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆಯ ನಡುವಿನ ಮೈತ್ರಿಯಲ್ಲಿ ನಮ್ಮ ಆರ್ ಪಿ ಐ ಪಕ್ಷಕ್ಕೆ ಯಾವುದೇ ಸ್ಥಾನಗಳನ್ನು ನೀಡಿಲ್ಲ, ಇದು ದಲಿತರಿಗೆ ಮಾಡಿರುವ ಅವಮಾನವೆಂದು ಕೇಂದ್ರ ಸಚಿವ ರಾಮದಾಸ್ ಅಠವಾಲೆ ಹೇಳಿದ್ದಾರೆ.
ನನ್ನನ್ನು ಕಾಂಗ್ರೆಸ್ ಮತ್ತು ಎನ್ ಸಿ ಪಿ ಪಕ್ಷಗಳು ಸಂಪರ್ಕಿಸಿವೇ, ಆದರೆ ನಾನು ನರೇಂದ್ರ ಮೋದಿ ಅವರೊಂದಿಗೆ ಉಳಿಯಲು ಬಯಸುತ್ತೇನೆ. ಸೀಟು ಹಂಚಿಕೆ ಬಗ್ಗೆ ಬಿಜೆಪಿ ಮತ್ತು ಶಿವಸೇನೆಯವರು ಮತ್ತೊಮ್ಮೆ ಯೋಚಿಸಬೇಕು ಎಂದು ಹೇಳಿದರು.
ಒಂದು ವೇಳೆ ನಮ್ಮ ಪಕ್ಷಕ್ಕೆ ಬಿಜೆಪಿ ಮತ್ತು ಶಿವಸೇನಾ ಯಾವುದೇ ಸ್ಥಾನಗಳನ್ನು ನೀಡದಿದ್ದರೆ, ನಾನು ಬೇರೆ ದಾರಿ ಹಿಡಿಯಬೇಕಾಗುತ್ತದೆ ಎಂದು ರಾಮದಾಸ್ ಅಠವಾಲೆ ಎಚ್ಚರಿಕೆ ನೀಡಿದ್ದಾರೆ.
ಏತನ್ಮಧ್ಯೆ, ದಕ್ಷಿಣ ಮಧ್ಯ ಮುಂಬೈ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ರಾಮದಾಸ್ ಅಥಾವಲೆ ಉತ್ಸುಕನಾಗಿದ್ದಾರೆ.