ರಮೇಶ ಜಾರಕಿಹೊಳಿ ರಾಜೀನಾಮೆ : ಸತೀಶ ವ್ಯಂಗ್ಯ

ರಮೇಶ ಜಾರಕಿಹೊಳಿ ರಾಜೀನಾಮೆ : ಸತೀಶ ವ್ಯಂಗ್ಯ

ಬೆಳಗಾವಿ, ಜು. 4 : ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿಯ ರಾಜಕೀಯ ನಡೆಯನ್ನು, ಅವರ ಸಹೋದರ ಸತೀಶ್ ಜಾರಕಿಹೊಳಿ ವ್ಯಂಗ್ಯ ವಾಡಿದ್ದಾರೆ. ರಮೇಶ್ ರಾಜೀನಾಮೆ ನಾಟಕದ ಹಿಂದೆ ಬೇರದೇ ಕಾರಣಗಳಿವೆ. ನಾನು ಹಿಂದಿನಿಂದಲೂ ಹೇಳಿಕೊಂಡು ಬರುತ್ತಿರುವ ಹಾಗೇ, ಅವರ ಅಳಿಯಂದಿರರೇ ದೊಡ್ಡ ಸಮಸ್ಯೆ ಎಂದು ಸತೀಶ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಲು ಅವರ ಮೂವರು ಅಳಿಯಂದಿರು ಕಾರಣ ಎಂದಿದ್ದಾರೆ. ರಮೇಶ್ ಜಾರಕಿಹೊಳಿ ಅವರ ಅಳಿಯಂದಿರನ್ನೇ ಸತೀಶ್ ಜಾರಕಿಹೊಳಿ ತ್ರೀ ಇಡಿಯಟ್ಸ್ ಎಂದಿರುವುದು ಸಹೋದರನ ರಾಜಕೀಯ ನಡೆಯನ್ನು ವಿಶ್ವದ ಎಂಟನೇ ಅದ್ಭುತ ಎಂದು ವ್ಯಂಗ್ಯವಾಡಿರುವ ಸತೀಶ್, ಬಿಜೆಪಿಯವರು ರಮೇಶ್ ರಾಜೀನಾಮೆಗೆ ಒತ್ತಡ ಹೇರುತ್ತಿದ್ದಾರೆ ಎನ್ನುವುದನ್ನು ನಾನು ಒಪ್ಪುವುದಿಲ್ಲ ಎಂದಿದ್ದಾರೆ. ರಮೇಶ್ ರಾಜೀನಾಮೆ ಕೊಟ್ಟ ನಂತರವಷ್ಟೇ ಚುನಾವಣೆಯ ವಿಷಯ. ಹೈಕಮಾಂಡ್ ಈ ವಿಚಾರದಲ್ಲಿ ಏನು ಸೂಚಿಸುತ್ತೋ, ಅದರಂತೆಯೇ ನಡೆಯುತ್ತೇವೆ ಎಂದು ಸತೀಶ್ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos