ತುಮಕೂರು, ಡಿ. 16 : ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ವಿರುದ್ಧ ಮಾಜಿ ಶಾಸಕ ಕೆ.ಎನ್.ರಾಜಣ್ಣ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.
ಕೊರಟಗೆರೆ ತಾಲೂಕಿನ ಎಲೆ ರಾಂಪುರದಲ್ಲಿ ನಡೆದ ಡಿಸಿಸಿ ಬ್ಯಾಂಕ್ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಂ ವಿರುದ್ಧ ಕಿಡಿಕಾರಿದರು. ಕಳೆದ ಚುನಾವಣೆಯಲ್ಲಿ ನಾನು ಸೋತರೂ ಪರಮೇಶ್ವರ್ ಅವರ ಗೆಲುವಿಗೆ ನಾವು ಶ್ರಮಿಸಿದ್ದೇವೆ.
ಆತ ಗೆದ್ದು ಉಪ ಮುಖ್ಯಮಂತ್ರಿಯೂ ಕೃತಜ್ಞತೆಯನ್ನು ಮರೆತ ಎಂದು ರಾಜಣ್ಣ ಛೇಡಿಸಿದರು. ಅಧಿಕಾರ ಇದ್ದಾಗ ನಾಯಿ, ನರಿಗಳ ಮಾತು ಕೇಳಿ ಡಿಸಿಸಿ ಬ್ಯಾಂಕ್ ಸೂಪರ್ಸೀಡ್ ಮಾಡಿದ್ದ. ನನ್ನನ್ನು ಅಧಿಕಾರದಿಂದ ತೆಗೆಯಲು ಹರಸಾಹಸ ಪಟ್ಟ ಪರಿಣಾಮವೇ ಇಂದು ಅವರನ್ನು ಕ್ಯಾರೆ ಎನ್ನುವವರು ಇಲ್ಲದಂತಾಗಿದೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.