ರೈತ ಮಹಿಳೆ ಜಯಶ್ರೀ  ಸುಮಲತಾ ಪರ ಬ್ಯಾಟಿಂಗ್​

ರೈತ ಮಹಿಳೆ ಜಯಶ್ರೀ  ಸುಮಲತಾ ಪರ ಬ್ಯಾಟಿಂಗ್​

ಮಂಡ್ಯ, ಏ. 9, ನ್ಯೂಸ್ ಎಕ್ಸ್ ಪ್ರೆಸ್: ಕಬ್ಬಿನ ಬಾಕಿ ಬಿಲ್ ಪಾವತಿ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿದ್ದ ರೈತ ಮಹಿಳೆ ಜಯಶ್ರೀ ಗುರಣ್ಣವರ್ ಅವರಿಗೆ ‘ಇಷ್ಟು ದಿನ ಎಲ್ಲಿ ಮಲಗಿದ್ದಿಯಮ್ಮಾ’ ಎಂದು ವ್ಯಂಗ್ಯವಾಡಿದ್ದರು ಸಿಎಂ ಕುಮಾರಸ್ವಾಮಿ – ರೈತ ಮಹಿಳೆ ಜಯಶ್ರಿ ಗುರಣ್ಣವರ್ ಗೆ ‘ಇಷ್ಟು ದಿನ ಎಲ್ಲಿ ಮಲಗಿದ್ದಿಯಮ್ಮಾ’ ಎಂದು ಸಿಎಂ ವ್ಯಂಗ್ಯ ಮಾಡಿ ಎಲ್ಲೆಡೆಗಳಿಂದ ಸಿಎಂ ಟೀಕೆಗಳಿಗೆ ಒಳಗಾಗಿದ್ದರು. ಈ ವಿಚಾರ ರಾಜ್ಯಾದ್ಯಂತ ಸದ್ದು ಮಾಡಿತ್ತು. ಮಂಡ್ಯದ ಅನೇಕ ರೈತ ಮುಖಂಡರು ಜಯಶ್ರೀ ಅವರು ಸುಮಲತಾ ಪರವಾಗಿ ಪ್ರಚಾರ ಮಾಡಲು ಬರುವಂತೆ ಕೇಳಿಕೊಂಡಿದ್ದಾರೆ. ಇದರಿಂದ ಜಿಲ್ಲೆಯ ಅನೇಕ ರೈತರ ಜೊತೆ ಸೇರಿ ಪ್ರಚಾರಕ್ಕೆ ಹೋಗುವುದಾಗಿ ಅವರು ತಿಳಿಸಿದರು. ಇದೀಗ ಜಯಶ್ರೀ ಸುಮಲತಾ ಅಂಬರೀಶ್ ಪರ ಪರ ಪ್ರಚಾರಕ್ಕೆ ಹೋಗುತ್ತೇನೆ ಎಂದಿದ್ದಾರೆ.

ಕುಟುಂಬ ರಾಜಕಾರಣ ಹಾಗೂ ಸಿಎಂ ಕುಮಾರಸ್ವಾಮಿ ಅವರ ರೈತ ವಿರೋಧಿ ನಡೆ ವಿರೋಧಿಸಿ ಮಂಡ್ಯ ರೈತರಲ್ಲಿ ಅವರ ಮಗನ ಪರವಾಗಿ ಮತ ನೀಡದಂತೆ ಕೇಳಿಕೊಳ್ಳಲು ಸುಮಲತಾ ಅಂಬರೀಶ್ ಪರ ಪ್ರಚಾರಕ್ಕೆ ಹೋಗುತ್ತೇನೆ ಎಂದು ರೈತ ಮಹಿಳೆ ಜಯಶ್ರೀ ಗುರಣ್ಣವರ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಯಶ್ರೀ, ಜೆಡಿಎಸ್ ಪಕ್ಷ ಕುಟುಂಬ ರಾಜಕರಣಕ್ಕೆ ಅಂಟಿಕೊಂಡಿದೆ. ರೈತರ ಹಲವಾರು ಸಮಸ್ಯೆಗಳಿಗೆ ಸಿಎಂ ಕುಮಾರಸ್ವಾಮಿ ಸರಿಯಾಗಿ ಸ್ಪಂದಿಸಿಲ್ಲ. ಉತ್ತರ ಕರ್ನಾಟಕ ಭಾಗದ ಕಬ್ಬು ಬೆಳೆಗಾರರ ಬಾಕಿ ಬಿಲ್ ಕೊಡಿಸುವಲ್ಲಿ ವಿಫಲವಾಗಿದ್ದು, ಇದನ್ನು ಮಂಡ್ಯ ಜನರಿಗೆ ತಿಳಿಸುವ ಉದ್ದೇಶದಿಂದ ಸುಮಲತಾ ಪರವಾಗಿ ಪ್ರಚಾರ ಮಾಡಲು ಹೋಗುತ್ತೇನೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos