ವರುಣನ  ಆರ್ಭಟ 1 ಸಾವು

ವರುಣನ  ಆರ್ಭಟ 1 ಸಾವು

ಚಿಕ್ಕೋಡಿ, ಜೂ. 24: ನೆನ್ನೆ ರಾತ್ರಿಯಲ್ಲಿ ವರುಣನ ಆರ್ಭಟಕ್ಕೆ ಇಲ್ಲಿಯ ಜನರು ಕಂಗಾಲಾಗಿದ್ದಾರೆ. ಹೌದು, ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾ ಪಟ್ಟಣದಲ್ಲಿ ನೆನ್ನೆ ಸಂಜೆ ಸುರಿದ ಭಾರಿ ಮಳೆಗೆ ನಗರದ ರಸ್ತೆಗಳು ಹಳ್ಳದಂತೆ ನೀರು ಹರಿಯಿತು.

ನೀರಿನ ರಭಸಕ್ಕೆ ಕಾರ್, ದ್ವಿಚಕ್ರವಾಹನಗಳು ಕೊಚ್ಚಿಕೊಂಡು ಹೋದವು.

ಅಂಬೇಡ್ಕರ್ ನಗರದ ಮನೆಯೊಂದರಲ್ಲಿ ನೀರು ನುಗ್ಗಿದ್ದು, ಆ ಮನೆಯಲ್ಲಿ ಅನಾರೋಗ್ಯದಿಂದ ಮಂಚದ ಮೇಲೆ ಮಲಗಿದ್ದ ವೃದ್ದೆ ಚಂಪಾ ಬಾಯಿ ಸಿಂಧೆ ಎಂಬುವರು ಇಂದು ಬೆಳಿಗ್ಗೆ ನಿಧನರಾದರು.

ಯಕ್ಸಂಬಾ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೀರು ನುಗ್ಗಿದ್ದು, ಬೆಳಿಗ್ಗೆ ಸಿಬ್ಬಂದಿ ಕೇಂದ್ರದೊಳಗಿನ ಕೆಸರು ಸ್ವಚ್ಛ ಗೊಳಿಸುತ್ತಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos