ವರುಣನ ಆರ್ಭಟಕ್ಕೆ2 ಬಲಿ!

ವರುಣನ ಆರ್ಭಟಕ್ಕೆ2 ಬಲಿ!

ಹಾವೇರಿ. 6: ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ನಿನ್ನೆ ಒಬ್ಬ ವ್ಯಕ್ತಿ ಬಲಿಯಾಗಿದ್ದ. ಇಂದು ಮಹಾಮಳೆಗೆ ಮತ್ತೆರಡು ಜೀವಗಳು ಬಲಿಯಾಗಿವೆ.

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶ್ರಿಂಗೇರಿ ಗ್ರಾಮದಲ್ಲಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ಧಾನೆ. ಮೃತಪಟ್ಟ ವ್ಯಕ್ತಿ ಶಿವಪ್ಪ ಸೊಟ್ಟಕ್ಕನವರ (50) ಎಂದು ತಿಳಿದು ಬಂದಿದೆ. ಶಿವಪ್ಪ ಮೂಲತಃ ಶ್ರೀಂಗೇರಿ ಗ್ರಾಮದ ನಿವಾಸಿಯಾಗಿದ್ದ ಎನ್ನಲಾಗಿದೆ. ಬೆಳಗ್ಗೆ ಗದ್ದೆ ಕೆಲಸಕ್ಕೆ ಹೋಗಿದ್ದ ಶಿವಪ್ಪ, ಖ್ಯಾನಲ್​​ನಲ್ಲಿ ಕೈ, ಕಾಲು ತೊಳೆಯುವ ವೇಳೆ ರಭಸವಾಗಿ ಬಂದ ನೀರಿನಿಂದ ಕೊಚ್ಚಿಹೋಗಿದ್ದಾನೆ.  ಮಳಗಿ ಡ್ಯಾಂನಿಂದ ಹರಿದುಬಂದ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ. ತಜ್ಞರು ಶಿವಪ್ಪನಿಗಾಗಿ ಕಾರ್ಯ ನಡೆಸುತ್ತಿದ್ಧಾರೆ.

ಇನ್ನು, ಬೆಳಗಾವಿ ಜಿಲ್ಲೆಯಲ್ಲಿ ಮಳೆ ಅವಾಂತರಕ್ಕೆ ಮತ್ತೊಂದು ಬಲಿಯಾಗಿದೆ.  ಟ್ರಾಫಿಕ್ ನಿಯಂತ್ರಣ ಮಾಡುತ್ತಿದ್ದ ಪಿಎಸ್‌ಐ ಸಾವನ್ನಪ್ಪಿದ್ದಾರೆ.  ಕರ್ತವ್ಯ ನಿರತ ಪಿಎಸ್‌ಐ ಈರಣ್ಣ ಲಟ್ಟಿ ಮೃತಪಟ್ಡಿರುವ ವ್ಯಕ್ತಿ. ಕಿತ್ತೂರು ತಾಲೂಕಿನ  ಎಂ. ಕೆ. ಹುಬ್ಬಳ್ಳಿ ಬಳಿ   ಮಲಪ್ರಭಾ ನದಿ ತುಂಬಿ ಹರಿಯುತ್ತಿದ್ದು ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು ಬಂದಿತ್ತು. ಈ ವೇಳೆ ವಾಹನ ಸಂಚಾರ ಸರಿಪಡಿಸುವಾಗ ಜೋರಾಗಿ ಬಂದ ಕಾರೊಂದು ಬಂದು ಗುದ್ದಿದೆ. ಪಿಎಸ್‌ಐ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos