ಮಣಿಪಾಲ, ಆ. 13: ಕಳೆದ ಒಂದು ವಾರದಿಂದ ಎಲ್ಲೇಡೆ ಮಳೆರಯನ ಆರ್ಭಟಕ್ಕೆ ಜಲಪ್ರಳಯಾನೆ ಯಾಗುತ್ತಿದ್ದು, ಕರಾವಳಿಯಲ್ಲಿ ಎರಡು ದಿನ ಬ್ರೇಕ್ ನೀಡಿದ ನಂತರ ಮತ್ತೆ ಅರುಣನ ಆರ್ಭಟ ಶುರುವಾಗಿದೆ.
ಹೌದು, ಉಡುಪಿ ಜಿಲ್ಲೆಯ ಕಾಪು, ಉಡುಪಿ, ಮಣಿಪಾಲ, ಕುಂದಾಪುರ, ಶಿರ್ವ, ಕಾರ್ಕಳ, ಕೊಲ್ಲೂರು ಭಾಗದಲ್ಲಿ ನೆನ್ನೆ ರಾತ್ರಿಯಿಂದಲೂ ಮಳೆ ಸುರಿಯುತ್ತಿದ್ದು, ಇಂದು ಕುಡಾ ಮಳೆ ಮುಂದುವರಿದಿದೆ.
ಭಾರೀ ಮಳೆಯಿಂದಾಗಿ ಪಲಿಮಾರು ತಗ್ಗು ಪ್ರದೇಶಗಳಲ್ಲಿ ನೆರೆ ನೀರು ಏರಿ ನಿಂತಿದೆ. ಮೂಡು ಪಲಿಮಾರು, ಹೊಯಿಗೆ ಹಾಗೂ ಅವರಾಲು ಅಣೆಕಟ್ಟು ಪ್ರದೇಶದ ಸುಮಾರು ಹದಿನೈದು ಮನೆ ಮಂದಿಗೆ ಇದರಿಂದ ತೊಂದರೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ವೇಣೂರು, ಬಂಟ್ವಾಳ, ಸುಬ್ರಹ್ಮಣ್ಯ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಬೆಳ್ತಂಗಡಿ, ಮೂಡಬಿದಿರೆ ಪ್ರದೇಶದಲ್ಲೂ ಮಳೆ ಸುರಿಯುತ್ತಿದ್ದು, ಆದರೆ ತೀವ್ರತೆ ಕಡಿಮೆಯಾಗಿದೆ.