ಹುಬ್ಬಳ್ಳಿ, ಜ. 28: ಅಂಜನಾ ಪಟೇಲ್ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಗೋಕುಲ್ ರೋಡ ಕೋಟಿಲಿಂಗ ನಗರದಲ್ಲಿರುವ ರಾಧಾಕೃಷ್ಣ ರಾಜಾರಾಮ ದೇವರುಗಳ ಪ್ರಾಣ ಪ್ರತಿಷ್ಠಾನ ಮಹೋತ್ಸವ ಹಾಗೂ ರಾಜೇಶ್ವರ ಸಭಾಭವನ ಕಟ್ಟಡದ ಉದ್ಘಾಟನೆ ಅನ್ನು ಇದೇ ಜ. ಜ.29 ರಿಂದ ಫೆ.1 ರವರೆಗೆ ನಡೆಯಲಿದೆ ಎಂದು ಸಂಘದ ಕಾರ್ಯಕರ್ತಿ ತೇಜಾರಾಮ ಚೌಧರಿ ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಜನಾ ಪಟೇಲ್ ಸಮಾಜದ ಸ್ವಾಮಿಗಳಾದ ರಾಜಸ್ತಾನದ ಪೀರಾತಾಸ ಶಿಕಾರ ಪೀಠದ ದಯಾರಾಮಜಿ ಮಹಾರಾಜರು ಸಾನಿಧ್ಯ ವಹಿಸುವರು.
ಜ. 30 ರಂದು ಬೆಳಗ್ಗೆ 8 ಕ್ಕೆ ಶೋಭಾ ಯಾತ್ರೆ ನಡೆಯಲಿದೆ. ಜ.31 ರಂದು ಮಧ್ಯಾಹ್ನ 1 ಕ್ಕೆ ರಾಜೇಶ್ವರ ಸಭಾಭವನದ ಉದ್ಘಾಟನೆ ಸಮಾರಂಭ ಇದ್ದು, ಈ ಸಮಾರಂಭಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರಸಿಂಗ್ ಶೆಖಾವತ್, ರಾಜಸ್ತಾನದ ಸಹಕಾರ ಸಚಿವ ಉದಿಲಾಲಜಿ ಅಂಜನಾ, ಮಾಜಿ ಕಂದಾಯ ಸಚಿವ ಅಮರರಾಮಜಿ ಚೌಧರಿ ಸೇರಿದಂತೆ ಹಲವಾರು ಗಣ್ಯರು ಸೇರುವವರು. ಫೆ.1 ರಂದು ಪ್ರಮುಖರಿಗೆ ಹಾಗೂ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಮಾಡಲಾಗುವುದು ಎಂದರು.
ಗೋಷ್ಠಿಯಲ್ಲಿ ವಸಂಘದ ಅಧ್ಯಕ್ಷರಾದ ದುದಿರಾಮ ಚೌಧರಿ, ಪ್ರ. ಕಾರ್ಯದರ್ಶಿ ಕಿಶೋರ ಪಟೇಲ್, ಇತರರು ಇದ್ದರು.