ಕೋರಮಂಗಲದಲ್ಲಿ‌ ನಿಲ್ಲದ ಪಬ್​ ರಂಪಾಟ… ಸಿಬ್ಬಂದಿಯಿಂದ ಹಲ್ಲೆ!

ಕೋರಮಂಗಲದಲ್ಲಿ‌ ನಿಲ್ಲದ ಪಬ್​ ರಂಪಾಟ… ಸಿಬ್ಬಂದಿಯಿಂದ ಹಲ್ಲೆ!

ಬೆಂಗಳೂರು, ಮೇ.6, ನ್ಯೂಸ್ ಎಕ್ಸ್ ಪ್ರೆಸ್: ದಿನದಿಂದ ದಿನಕ್ಕೆ ಪಬ್​ಗಳ ರಂಪಾಟ ಹೆಚ್ಚಾಗುತ್ತಲೇ ಇದ್ದು, ಬೆಂಗಳೂರಿನಲ್ಲಿ ಇಬ್ಬರು ಯುವಕರು ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಹೋಗಿದ್ದ ವೇಳೆ ಗ್ರಾಹಕ ಮತ್ತು ಸಿಬ್ಬಂದಿ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಪ್ರತಿಷ್ಠಿತ ಪಬ್​ವೊಂದರಲ್ಲಿ ಗ್ರಾಹಕ ಮತ್ತು ಸಿಬ್ಬಂದಿ ನಡುವೆ ಮಾರಾಮಾರಿ ನಡೆದಿರುವ ಘಟನೆ ನಿನ್ನೆ ತಡರಾತ್ರಿ ಬೆಳಕಿಗೆ ಬಂದಿದೆ‌.‌ ಹೌದು, ನಿನ್ನೆ ರಾತ್ರಿ ದೀಪಕ್ ಹಾಗೂ ಆನಂದ್ ಎನ್ನುವವರು ಸ್ನೇಹಿತರೊಂದಿಗೆ ಪಾರ್ಟಿ ಇದ್ದ ಕಾರಣ ಪಬ್​ಗೆ ತೆರಳಿದ್ದಾರೆ. ಈ ವೇಳೆ, ಅಲ್ಲಿನ ಸಿಬ್ಬಂದಿ ಇವರಿಬ್ಬರ ವಿರುದ್ಧ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದಿದ್ದಾರೆ. ಜಗಳ ವಿಕೋಪಕ್ಕೆ ಏರಿ ‌ಪಬ್​ನಲ್ಲಿದ್ದ ಕುರ್ಚಿಗಳನ್ನ ಎಸೆದಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ದೀಪಕ್ ಹಾಗೂ ಆನಂದ್​ಗೆ ಮೆಟಲ್ ಚೇರ್​ನಿಂದ ಹಲ್ಲೆ ಮಾಡಿದ್ದಾರೆ. ಮತ್ತು ಪಾರ್ಟಿಯಲ್ಲಿದ್ದ ಕೆಲ ಮಂದಿ ಮೇಲೂ ಸಹ ಹಲ್ಲೆ ಮಾಡಿದ್ದಾರೆ.

ಇನ್ನು ಹಲ್ಲೆಯಿಂದ ಆನಂದ್​ಗೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ತಕ್ಷಣ ಆತ್ಮರಕ್ಷಣೆಗಾಗಿ ದೀಪಕ್ ಪೊಲೀಸರಿಗೆ ಕರೆ ಮಾಡಿದ್ದಾನೆ. ಪೊಲೀಸರು ಬರುವಷ್ಟಲ್ಲೇ ಕೆಲ ಸಿಬ್ಬಂದಿ ಎಸ್ಕೇಪ್ ಆಗಿದ್ದು, ಸದ್ಯಕ್ಕೆ ಆನಂದ್ ಹಾಗೂ ದೀಪಕ್​ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos