ಬೆಂಗಳೂರು: ಪಿಎಸ್ಐ ಪ್ರಶ್ನೆ ಪತ್ರಿಕೆ ಸೋರಿಕೆ ಯತ್ನ ಪ್ರಕರಣ ಸಂಬಂಧ ಮತ್ತೋರ್ವ ಪೊಲೀಸ್ ಪೇದೆಯನ್ನ ಬಂಧಿಸಲಾಗಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಕಿಂಗ್ ಪಿನ್ ಶಿವಕುಮಾರಯ್ಯ, ಬಸವರಾಜ್ ಹಾಗೂ ಹೋಳಿಯಪ್ಪ ಜೊತೆ ನಿಕಟ ಸಂಪರ್ಕ ಹೊಂದಿದ್ದರು.
ಈ ಹಿನ್ನೆಲೆಯಲ್ಲಿ ಹಲಸೂರು ಸಂಚಾರಿ ಠಾಣೆಯ ಪೇದೆ ವಿಠ್ಠಲ್ ಬ್ಯಾಕೋಡರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪರೀಕ್ಷೆ ಬರೆಯುವ ಅಭ್ಯರ್ಥಿಗಳನ್ನ ಏಜೆಂಟ್ಗಳಿಗೆ ಪರಿಚಯಿಸಿ, ಅವರಿಂದ ಹಣ ಪೀಕುತ್ತಿದ್ದರು ಎಂಬ ಆರೋಪ ವಿಠ್ಠಲ್ ಬ್ಯಾಕೋಡ ಮೇಲೆ ಕೇಳಿ ಬಂದಿದೆ.
ಈ ಹಿನ್ನೆಲೆಯಲ್ಲಿ ಆರೋಪಿ ಪೇದೆಯನ್ನು ಬಂಧಿಸಿ ಕೋರ್ಟ್
ಗೆ ಹಾಜರುಪಡಿಸಲಾಗಿದೆ.