ಹುಬ್ಬಳ್ಳಿ, ಜ. 20: ನಗರದ ಅಂಜುಮನ್ ಇ ಇಸ್ಲಾಂ ಸಂಸ್ಥೆಯ ನೇತೃತ್ವದಲ್ಲಿ ಇಂದು ಅಲ್ತಾಫ್ ನಗರ, ಎನ್.ಎ.ನಗರ, ಈಶ್ವರ ನಗರ, ಜನತನಗರದ ನಿವಾಸಿಗಳು ಎನ್.ಆರ್ ಸಿ ಮತ್ತು ಸಿಎಎ ವಿರೋಧಿಸಿ ನಗರದ ತಹಶಿಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು ಕೂಡಲೇ ಎನ್.ಆರ್ ಸಿ ಹಾಗೂ ಸಿಎಎ ಯನ್ನು ಪಾವಾಸ್ ಪಡೆಯಬೇಕೆಂದು ಆಗ್ರಹಿಸಿದರು. ಇನ್ನೂ ಒಂದು ವಾರದವರೆಗೆ ನಡೆಯಲಿರುವ ಈ ಪ್ರತಿಭಟನೆ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ನಡೆಯಲಿದೆ. ಈ ವೇಳೆ ಒಂದೊಂದು ದಿನಾ ನಗರದ ನಾಲ್ಕು ನಗರದ ನಿವಾಸಿಗಳು ಪ್ರತಿಭಟನೆ ಮಾಡಲಿದ್ದಾರೆ.
ಪ್ರತಿಭಟನೆಯಲ್ಲಿ ಮಾಜಿ ಸಂಸದ ಐ.ಜಿ.ಸನದಿ, ಮಾಜಿ ಸಚಿವ ಎ.ಎಮ್.ಹಿಂಡಸಗೇರಿ, ಮಾಜಿ ಎಂಎಲ್ ಸಿ ಇಸ್ಮಾಯಿಲ್ ಕಾಲೇಬುಡೆ, ಸಂಸ್ಥೆಯ ಅಧ್ಯಕ್ಷ ಮಹಮ್ಮದ್ ಯೂಸುಫ್ ಸವಣೂರು, ಉಪಾಧ್ಯಕ್ಷ ಅಲ್ತಾಫ್ ಕಿತ್ತೂರ, ಬಸೀರ ಹಳ್ಳೂರ ಸೇರಿದಂತೆ ಮುಂತಾದವರು ಇದ್ದರು.